ತಾಲ್ಲೂಕಿನ ಮಳಮಾಚನಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಈಚೆಗೆ ಅಣಕು ಸಂಸತ್ತು ಕಾರ್ಯಕಲಾಪವನ್ನು ಹಮ್ಮಿಕೊಳ್ಳಲಾಗಿತ್ತು.
ಮುಖ್ಯ ಶಿಕ್ಷಕಿ ಎ.ಎಂ.ಸಾವಿತ್ರಿ ದೇವಿ ಅವರು ಚಾಲನೆ ನೀಡಿದ ನಂತರ ಸದನವು ಪ್ರಾರಂಭವಾಗಿ ಸಂತಾಪಸಭೆ , ಪ್ರಶ್ನೋತ್ತರ ಕಲಾಪ, ಗಮನ ಸೆಳೆಯುವ ಸೂಚನೆಗಳು, ವಿಧೇಯಕಗಳ ಮಂಡನೆ, ಅಲ್ಪ ಕಾಲಾವಧಿ ಚರ್ಚೆಯನ್ನು ನಡೆಸಿದರು.
ಸಭಾಧ್ಯಕ್ಷರಾಗಿ ಹರಿಪ್ರಸಾದ್, ಮುಖ್ಯಮಂತ್ರಿಯಾಗಿ ವಿನಯ್ ಕುಮಾರ್, ಉಪಮುಖ್ಯಮಂತ್ರಿಯಾಗಿ ನಾಗವೇಣಿ, ಗೃಹಮಂತ್ರಿಯಾಗಿ ರವಿಕುಮಾರ್, ಹಣಕಾಸು ಮಂತ್ರಿಯಾಗಿ ಯಶ್ವಂತ್, ಶಿಕ್ಷಣ ಸಚಿವೆ ಬಾಂಧವ್ಯ, ಕೃಷಿ ಸಚಿವ ಅರುಣ್ ಕುಮಾರ್, ಪಶುಸಂಗೋಪನೆ ಸಚಿವೆ ರಮ್ಯ, ರೇಷ್ಮೆ ಸಚಿವ ಸಲೀಂ ಪಾಷ, ಗ್ರಾಮೀಣಾಭಿವೃದ್ಧಿ ಹಾಗೂ ವಿದ್ಯುತ್ ಸಚಿವೆ ಭೂಮಿಕ, ನೀರಾವರಿ ಸಚಿವೆ ಭಾರ್ಗವಿ, ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮಂತ್ರಿ ಅರ್ಚನಾ, ಆಹಾರ ಸಚಿವ ಮನೋಜ್ ಕುಮಾರ್, ಲೋಕೋಪಯೋಗಿ ಸಚಿವೆ ಮೌನಿಕ, ಸಾರಿಗೆ ಸಚಿವೆ ಕಲ್ಪನ, ಆರೋಗ್ಯ ಸಚಿವೆ ಐಶ್ವರ್ಯ ಭಾಗವಹಿಸಿದ್ದರು.
ವಿರೋಧ ಪಕ್ಷದಲ್ಲಿ ಭರತ್ ಕುಮಾರ್, ಚಲಪತಿ, ಪುನೀತ್ ಕುಮಾರ್, ರವಿಕುಮಾರ್, ಸುರೇಶ್, ಗಜವತಿ , ಗಗನ, ಕೃಷಿ, ರೇಷ್ಮೆ, ಕಬ್ಬು ಬೆಳೆಗಾರರ ಸಮಸ್ಯೆ, ಜಾನುವಾರುಗಳಿಗೆ ಹರಡುವ ಕಾಲುಬಾಯಿ ರೋಗ, ಶಾಲೆಗಳಲ್ಲಿನ ಕುಡಿಯುವ ನೀರಿನ ಸಮಸ್ಯೆ, ಶೌಚಾಲಯ, ಶಿಕ್ಷಕರ ಕೊರತೆಯ ಬಗ್ಗೆ ಚರ್ಚಿಸಲಾಯಿತು. ರಸ್ತೆಗಳು, ವಿದ್ಯುತ್ ಸಮಸ್ಯೆ, ಇತ್ತಿಚಿನ ನೆರೆ ಹಾವಳಿ, ಅರಣ್ಯದಲ್ಲಿನ ಕಳ್ಳ ಸಾಗಣೆ, ಭ್ರಷ್ಟಾಚಾರಗಳ ಬಗ್ಗೆ ಕೂಡ ಚರ್ಚಿಸಲಾಯಿತು.
ಪ್ರೇಕ್ಷಕರ ಗ್ಯಾಲರಿಯಲ್ಲಿ ಮುಖ್ಯಶಿಕ್ಷಕಿ ಎ. ಎಂ. ಸಾವಿತ್ರಿದೇವಿ, ಸಹಶಿಕ್ಷಕರುಗಳಾದ ಎಂ. ಜಿ. ವಿ. ಶಾಸ್ತ್ರೀ, ವಾಣಿ, ಮಮತ, ಆಶಾಜ್ಯೋತಿ, ಸತೀಶ, ಮೂರ್ತಿ, ಸುಶ್ಮಾ ನಾರಾಯಣಕರ್, ಎಸ್ ಡಿ ಎಂ ಸಿ ನಾಮನಿರ್ದೇಶನ ಸದಸ್ಯರಾದ ಬಿ. ಬೈರೇಗೌಡ , ಬಿ. ಎನ್. ಕೃಷ್ಣಯ್ಯ ಸದನದ ಕಾರ್ಯಕಲಾಪಗಳನ್ನು ವೀಕ್ಷಿಸಿ ಆನಂದಿಸಿದರು.
- Advertisement -
- Advertisement -
- Advertisement -
- Advertisement -