ನಗರದ ನಗರಸಭಾ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಸಿಬ್ಬಂದಿಯ ಬೇಜಾವಾಬ್ದಾರಿಯಿಂದಾಗಿ ಕಸವನ್ನು ತೆಗೆಯದೆ ಸ್ಥಳೀಯ ನಾಗರಿಕರು ಹಲವಾರು ರೋಗರುಜಿನಗಳಿಂದ ಬಳಲುವಂತಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ನಗರದ ಅಶೋಕರಸ್ತೆಯಲ್ಲಿರುವ ಹೂವಿನ ಸರ್ಕಲ್ನ ಬಳಿಯಲ್ಲಿ ಹೋಟೆಲೊಂದರ ಹಿಂಭಾಗದಲ್ಲಿ ಕಳೆದ ಹದಿನೈದು ದಿನಗಳಿಂದ ರಾಶಿಯಾಗಿ ಬಿದ್ದಿರುವ ಕಸವನ್ನು ವಿಲೇವಾರಿ ಮಾಡದೆ ಇರುವ ಕಾರಣದಿಂದಾಗಿ ಸುತ್ತಮುತ್ತಲಿನ ಪ್ರದೇಶದಲ್ಲಿ ದುರ್ನಾತ ಬೀರುತ್ತಿದೆ. ಅಶೋಕ ರಸ್ತೆಯ ಹೂ ಸರ್ಕಲ್ನಲ್ಲಿ ಸಾಮೂಹಿಕ ಶೌಚಾಲಯಗಳು ಇಲ್ಲದ ಕಾರಣದಿಂದಾಗಿ ಸ್ಥಳೀಯ ನಾಗರೀಕರು ಕೂಡಾ ಕಸವನ್ನು ಹಾಕಿರುವ ಜಾಗದಲ್ಲಿ ಮಲಮೂತ್ರ ವಿಸರ್ಜನೆಗಳನ್ನು ಮಾಡುತ್ತಿರುವುದರಿಂದಲೂ ಪರಿಸರ ಹಾಳಾಗುತ್ತಿದ್ದು, ಸಂಜೆಯಾದರೆ, ಸೊಳ್ಳೆಗಳ ಕಾಟ ಹೆಚ್ಚಾಗಿದೆ, ಇಲ್ಲಿನ ನಿವಾಸಿಗಳು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಪೊಲೀಸ್ ಠಾಣೆಯ ಸಮೀಪವಿರುವ ನಗರಸಭೆಯ ಖಾಲಿ ಸ್ಥಳದಲ್ಲೂ ಕಸ, ತ್ಯಾಜ್ಯ ತುಂಬಿದ್ದು, ಕಳೆದೆರಡು ದಿನಗಳಲ್ಲಿ ಬಿದ್ದ ಮಳೆಯಿಂದಾಗಿ ತ್ಯಾಜ್ಯವೆಲ್ಲಾ ಕೊಳೆತು ಕೆಟ್ಟ ವಾಸನೆ ಬೀರುತ್ತಿದೆ. ಈ ಬಗ್ಗೆ ನಗರಸಭೆಯ ಅಧಿಕಾರಿಗಳಿಗೆ ಅನೇಕ ಬಾರಿ ತಿಳಿಸಿದ್ದರೂ ಕೂಡಾ ಯಾವುದೇ ಪ್ರಯೋಜನವಾಗಿಲ್ಲವೆಂದು ಸ್ಥಳೀಯರು ದೂರಿದ್ದಾರೆ.
- Advertisement -
- Advertisement -
- Advertisement -
- Advertisement -