ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಮೀಸಲಾತಿ ವಿವರ

- Advertisement -
- Advertisement -

ನಗರದ ಮಯೂರ ಚಿತ್ರಮಂದಿರದಲ್ಲಿ ಗುರುವಾರ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ನೇತೃತ್ವದಲ್ಲಿ ತಾಲ್ಲೂಕಿನ 28 ಗ್ರಾಮ ಪಂಚಾಯತಿವಾರು ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಮೀಸಲಾತಿ ವಿವರ ಪ್ರಕಟಿಸಲಾಯಿತು.
28 ಗ್ರಾಮ ಪಂಚಾಯತಿಗಳಲ್ಲಿ ಮಹಿಳೆಯರಿಗೆ 14 ಅಧ್ಯಕ್ಷ ಮತ್ತು 14 ಉಪಾಧ್ಯಕ್ಷರ ಸ್ಥಾನಗಳು ದೊರೆತಿವೆ. ಈ ಮೀಸಲಾತಿ ಪ್ರಕ್ರಿಯೆಯನ್ನು ವೀಕ್ಷಿಸಲು ಹಾಗೂ ತಮ್ಮ ಗ್ರಾಮ ಪಂಚಾಯತಿಗೆ ಯಾರು ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಬಹುದೆಂಬ ಕುತೂಹಲದಿಂದ ನೂರಾರು ಮಂದಿ ತಾಲ್ಲೂಕಿನಾದ್ಯಂತ ವಿವಿದೆಡೆಯಿಂದ ನಗರದ ಮಯೂರ ಚಿತ್ರಮಂದಿರದ ಬಳಿ ಜಮಾಯಿಸಿದ್ದರು. ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರಿಂದ ಕೇವಲ ಗ್ರಾಮ ಪಂಚಾಯತಿ ಸದಸ್ಯರು ಮಾತ್ರ ಮೀಸಲಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ‘ಚುನವಣಾ ಆಯೋಗ ನಿಗಧಿಪಡಿಸಿರುವ ಮಾಟ್ರಿಕ್ಸ್ ವ್ಯವಸ್ಥೆಯಂತೆ ಮೀಸಲಾತಿಯನ್ನು ನಿಗದಿಪಡಿಸಲಾಗಿದೆ. 1993 ರಿಂದ ಇಲ್ಲಿಯವರೆಗೆ ಪುರನಾವರ್ತನೆಯನ್ನು ಕೂಡ ಪರಿಗಣನೆಗೆ ತೆಗೆದುಕೊಂಡಿದ್ದೇವೆ. ಗ್ರಾಮ ಪಂಚಾಯತಿ ಸದಸ್ಯರಾದವರು ತಮ್ಮ ವಾರ್ಡುಗಳಲ್ಲಿ ಕಡ್ಡಾಯವಾಗಿ ಎಲ್ಲರೂ ಶೌಚಾಲಯ ನಿರ್ಮಿಸಿಕೊಳ್ಳಲು ಮನವರಿಕೆ ಮಾಡಿಕೊಡಬೇಕು. ಈ ಮೂಲಕ ಜಿಲ್ಲೆಯನ್ನು ಐದು ವರ್ಷದೊಳಗೆ ಬಯಲು ಶೌಚ ಮುಕ್ತ ಜಿಲ್ಲೆಯನ್ನಾಗಿಸಬೇಕು. ಜಿಲ್ಲೆಯು ಸತತವಾಗಿ ಬರಗಾಲವನ್ನು ಎದುರಿಸುತ್ತಿರುವುದರಿಂದ ದೀರ್ಘಕಾಲ ಬಾಳಿಕೆ ಬರುವ ಗಿಡಗಳನ್ನು ನೆಡುವ ಮೂಲಕ ಪರಿಸರವನ್ನು ಸಮೃದ್ಧಿಗೊಳಿಸಿ. ಪಕ್ಷಾತೀತವಾಗಿ ಅನುದಾನವನ್ನು ಸದ್ಭಳಕೆ ಮಾಡಿಕೊಂಡು ಗ್ರಾಮದ ಅಭಿವೃದ್ಧಿಗೆ ಸದಸ್ಯರು ಶ್ರಮಿಸಬೇಕು’ ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ನವೀನ್ ರಾಜ್, ಡಿಡಿಎಲ್ಆರ್ ಅಜ್ಜಪ್ಪ, ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ನಿವೃತ್ತ ಅಧಿಕಾರಿ ಗೋಪಿನಾಥ್, ಚುನಾವಣಾ ತಹಶೀಲ್ದಾರ್ ಕುಮಾರಸ್ವಾಮಿ ಈ ಸಂದರ್ಭದಲ್ಲಿ ಹಾಜರಿದ್ದರು.
ತಾಲ್ಲೂಕಿನ ಗ್ರಾಮ ಪಂಚಾಯತಿವಾರು ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಮೀಸಲಾತಿ ವಿವರ:
ಅಬ್ಲೂಡು: ಪರಿಶಿಷ್ಟ ಜಾತಿ, ಹಿಂದುಳಿದ ವರ್ಗ ‘ಅ’(ಮ), ವೈ.ಹುಣಸೇನಹಳ್ಳಿ: ಪರಿಶಿಷ್ಟ ಜಾತಿ, ಹಿಂದುಳಿದ ವರ್ಗ ‘ಬ’, ದೇವರಮಳ್ಳೂರು: ಪರಿಶಿಷ್ಟ ಜಾತಿ(ಮ), ಹಿಂದುಳಿದ ವರ್ಗ ‘ಅ’(ಮ), ಕೊತ್ತನೂರು: ಸಾಮಾನ್ಯ(ಮ), ಪರಿಶಿಷ್ಟ ಜಾತಿ(ಮ), ತುಮ್ಮನಹಳ್ಳಿ: ಪರಿಶಿಷ್ಟ ಪಂಗಡ(ಮ), ಸಾಮಾನ್ಯ, ಆನೂರು: ಪರಿಶಿಷ್ಟ ಪಂಗಡ(ಮ), ಸಾಮಾನ್ಯ, ಹಂಡಿಗನಾಳ: ಪರಿಶಿಷ್ಟ ಪಂಗಡ, ಸಾಮಾನ್ಯ(ಮ), ಮೇಲೂರು: ಸಾಮಾನ್ಯ(ಮ), ಸಾಮಾನ್ಯ, ಮಳ್ಳೂರು: ಸಾಮಾನ್ಯ(ಮ), ಸಾಮಾನ್ಯ, ಜೆ.ವೆಂಕಟಾಪುರ: ಸಾಮಾನ್ಯ, ಹಿಂದುಳಿದ ವರ್ಗ ‘ಅ’, ಜಂಗಮಕೋಟೆ: ಹಿಂದುಳಿದ ವರ್ಗ ‘ಅ’(ಮ), ಪರಿಶಿಷ್ಟ ಜಾತಿ, ಕುಂಭಿಗಾನಹಳ್ಳಿ: ಹಿಂದುಳಿದ ವರ್ಗ ‘ಅ’, ಸಾಮಾನ್ಯ(ಮ), ಚೀಮಂಗಲ: ಸಾಮಾನ್ಯ(ಮ), ಸಾಮಾನ್ಯ, ದೊಡ್ಡತೇಕನಹಳ್ಳಿ: ಸಾಮಾನ್ಯ(ಮ), ಪರಿಶಿಷ್ಟ ಜಾತಿ, ಬಶೆಟ್ಟಹಳ್ಳಿ: ಹಿಂದುಳಿದ ವರ್ಗ ‘ಅ’(ಮ), ಪರಿಶಿಷ್ಟ ಜಾತಿ, ದಿಬ್ಬೂರಹಳ್ಳಿ: ಸಾಮಾನ್ಯ, ಸಾಮಾನ್ಯ(ಮ), ತಿಮ್ಮನಾಯ್ಕನಹಳ್ಳಿ: ಸಾಮಾನ್ಯ(ಮ), ಪರಿಶಿಷ್ಟ ಪಂಗಡ, ಗಂಜಿಗುಂಟೆ: ಪರಿಶಿಷ್ಟ ಜಾತಿ(ಮ), ಸಾಮಾನ್ಯ, ಈ.ತಿಮ್ಮಸಂದ್ರ: ಸಾಮಾನ್ಯ, ಪರಿಶಿಷ್ಟ ಜಾತಿ(ಮ), ಸಾದಲಿ: ಸಾಮಾನ್ಯ, ಪರಿಶಿಷ್ಟ ಪಂಗಡ(ಮ), ಎಸ್.ದೇವಗಾನಹಳ್ಳಿ: ಸಾಮಾನ್ಯ, ಸಾಮಾನ್ಯ(ಮ), ಪಲಿಚೆರ್ಲು: ಸಾಮಾನ್ಯ, ಪರಿಶಿಷ್ಟ ಪಂಗಡ(ಮ), ಕುಂದಲಗುರ್ಕಿ: ಪರಿಶಿಷ್ಟ ಜಾತಿ(ಮ), ಸಾಮಾನ್ಯ, ಭಕ್ತರಹಳ್ಳಿ: ಪರಿಶಿಷ್ಟ ಜಾತಿ, ಸಾಮಾನ್ಯ(ಮ), ಮಳಮಾಚನಹಳ್ಳಿ: ಪರಿಶಿಷ್ಟ ಜಾತಿ(ಮ), ಸಾಮಾನ್ಯ, ಹೊಸಪೇಟೆ: ಹಿಂದುಳಿದ ವರ್ಗ ‘ಬ’, ಪರಿಶಿಷ್ಟ ಜಾತಿ(ಮ), ನಾಗಮಂಗಲ: ಸಾಮಾನ್ಯ, ಸಾಮಾನ್ಯ(ಮ), ತಲಕಾಯಲಬೆಟ್ಟ: ಸಾಮಾನ್ಯ, ಪರಿಶಿಷ್ಟ ಜಾತಿ(ಮ)

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -
Sidlaghatta News Desk
Sidlaghatta News Deskhttp://www.sidlaghatta.com
The editorial desk of Sidlaghatta.com (Namma Shidlaghatta), covering civic affairs, agriculture, silk trade, and local government news for Sidlaghatta taluk, Karnataka.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!