ನಗರದ ಆಜಾದ್ ನಗರದಲ್ಲಿರುವ ಉರ್ದು ಪ್ರೌಢಶಾಲೆಯಲ್ಲಿ ಶನಿವಾರ ತಾಲ್ಲೂಕಿನ ಉರ್ದು ಪ್ರಾಥಮಿಕ ಶಾಲೆಗಳ ಮಕ್ಕಳಿಗೆ ನಡೆದ ಪ್ರತಿಭಾ ಕಾರಂಜಿಯಲ್ಲಿ ವಿಜೇತರಾದವರಿಗೆ ಟಿಪ್ಪು ಸುಲ್ತಾನ್ ಟ್ರಸ್ಟ್ ವತಿಯಿಂದ ಬಹುಮಾನಗಳನ್ನು ವಿತರಿಸಲಾಯಿತು.
ತಾಲ್ಲೂಕಿನ 16 ಉರ್ದು ಪ್ರಾಥಮಿಕ ಶಾಲೆಗಳ ಮಕ್ಕಳಿಗೆ ಹಮ್ದ್ (ಪ್ರಾರ್ಥನೆ), ಕವ್ವಾಲಿ, ಕ್ವಿಜ್, ಪಿಕ್ ಅಂಡ್ ಸ್ಪೀಕ್, ರಾಷ್ಟ್ರಗೀತೆ, ಪ್ರಬಂಧ, ಭಾಷಣ ಇತ್ಯಾದಿ ಸ್ಪರ್ದೆಗಳನ್ನು ನಡೆಸಿದ್ದು, ವಿಜೇತ ವಿದ್ಯಾರ್ಥಿಳಿಗೆ ಶಿಕ್ಷಣ ಇಲಾಖೆ ನೀಡುವ ಪ್ರಶಸ್ತಿಪತ್ರದೊಂದಿಗೆ ಟಿಪ್ಪು ಸುಲ್ತಾನ್ ಟ್ರಸ್ಟ್ ವತಿಯಿಂದ ಪ್ರೋತ್ಸಾಹಕವಾಗಿ ಮೆಡಲ್ ಹಾಗೂ ಬಹುಮಾನಗಳನ್ನು ವಿತರಿಸಲಾಯಿತು.
ಶಿಕ್ಷಣ ಇಲಾಖೆಯ ಮನ್ನಾರ್ಸ್ವಾಮಿ, ಟಿಪ್ಪು ಸುಲ್ತಾನ್ ಟ್ರಸ್ಟ್ನ ನಯೀಂಪಾಷ, ಎಂ.ಡಿ.ಸಾದಿಕ್, ಹಸೇನ್ಪಾಷ, ಸಾದಿಕ್ಪಾಷ, ಬಾಬಾಜಾನ್, ಬಕಶ್, ಮಹಬೂಬ್ಪಾಷ, ಶಾಲಾ ಮುಖ್ಯಶಿಕ್ಷಕ ಆಜಮ್ಪಾಷ, ಶಿಕ್ಷಕರಾದ ಸಾದಿಕ್, ಮಹಮ್ಮದ್ ಹಸೇನ್, ಜೀಯಾವುಲ್ಲಾ, ನಸ್ರೀನ್, ನಫೀಜಾ, ಫಾತೀಮಾ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -