20.6 C
Sidlaghatta
Tuesday, July 15, 2025

ಓದುವ ಮೂಲಕ ಜ್ಞಾನಭಂಡಾರವನ್ನು ಹೆಚ್ಚಿಸಿಕೊಳ್ಳಿ

- Advertisement -
- Advertisement -

ಗ್ರಾಮೀಣ ಮಕ್ಕಳು ಹಿಂಜರಿಕೆಯ ಮನೋಭಾವವನ್ನು ಬಿಡಬೇಕು. ಪಠ್ಯದೊಂದಿಗೆ ಗ್ರಂಥಾಲಯದಲ್ಲಿನ ವಿವಿಧ ಪುಸ್ತಕಗಳು ಹಾಗೂ ಪತ್ರಿಕೆಗಳನ್ನು ಓದುವ ಮೂಲಕ ಜ್ಞಾನಭಂಡಾರವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಬಿ.ಎಂ.ವಿ ಸಂಸ್ಥೆಯ ಕಾರ್ಯದರ್ಶಿ ಎಲ್.ಕಾಳಪ್ಪ ತಿಳಿಸಿದರು.
ತಾಲ್ಲೂಕಿನ ಭಕ್ತರಹಳ್ಳಿಯ ಬಿ.ಎಂ.ವಿ ಸಂಸ್ಥೆಯಲ್ಲಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಈಚೆಗೆ ಸ್ಮೈಲ್ ಫೌಂಡೇಷನ್ ಮತ್ತು ಇಂಟೆಲ್ ಕಂಪೆನಿ ವತಿಯಿಂದ ಮಕ್ಕಳಿಗೆ ಸೈಕಲ್, ನೀರಿನ ಬಾಟಲ್, ಟೀ ಶರ್ಟ್, ಲೇಖನ ಸಾಮಗ್ರಿ ಮತ್ತು ನೋಟ್ ಪುಸ್ತಕಗಳನ್ನು ವಿತರಿಸಿ ಅವರು ಮಾತನಾಡಿದರು.
ಆಧುನಿಕ ಯುಗದಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧೆ ಹೆಚ್ಚುತ್ತಿದ್ದು ಗ್ರಾಮೀಣ ಮಕ್ಕಳು ಹಿಂಜರಿಕೆ ಬಿಟ್ಟು ಮುಂದೆ ನುಗ್ಗಬೇಕು. ಯಶಸ್ಸಿಗೆ ಕಠಿಣ ಪರಿಶ್ರಮ ಅಗತ್ಯ. ಪ್ರತಿಭೆ ಎನ್ನುವುದು ಯಾರೊಬ್ಬರ ಸ್ವತ್ತೂ ಅಲ್ಲ. ನಿಮ್ಮಲ್ಲಿ ಪ್ರತಿಭೆ ಇದೆ ಎಂದರೆ ಜಗತ್ತು ನಿಮ್ಮನ್ನು ಗುರುತಿಸಿ ಸೆಳೆದುಕೊಳ್ಳುತ್ತದೆ ಎಂದು ಹೇಳಿದರು.
ಬಿ.ಎಂ.ವಿ ಸಂಸ್ಥೆಯ ಅಧ್ಯಕ್ಷ ಬಿ.ವಿ.ಮುನೇಗೌಡ, ಸಂಸ್ಥಾಪಕ ಟ್ರಸ್ಟಿ ಸಂತೆ ನಾರಾಯಣಸ್ವಾಮಿ, ಕೃಷಿ ತಜ್ಞ ಬಿ.ಎನ್.ಅಂಬರೀಷ್, ಎಂ.ವೆಂಕಟಮೂರ್ತಿ, ಪುಟ್ಟಮೂರ್ತಿ, ಮಕ್ಕಳ ಸುರಕ್ಷಾ ಸಮಿತಿ ಸದಸ್ಯ ಎ.ಎನ್.ದೇವರಾಜು, ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬೈರೇಗೌಡ, ತ್ಯಾಗರಾಜು, ಮುಖ್ಯ ಶಿಕ್ಷಕ ಎನ್.ಪಂಚಮೂರ್ತಿ, ಶಿಕ್ಷಕ ಯಾಮ ನಾರಾಯಣಸ್ವಾಮಿ ಹಾಜರಿದ್ದರು.
 

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!