ಚಿಕ್ಕಬಳ್ಳಾಪುರದಲ್ಲಿ ನಡೆಯುವ ಗಡಿನಾಡ ಕನ್ನಡಿಗರ ಜಾಗೃತಿ ಸಮಾವೇಶ ಮತ್ತು ಸದಸ್ಯತ್ವ ಆಂದೋಲನಕ್ಕೆ ತಾಲ್ಲೂಕಿನಿಂದ ಶುಕ್ರವಾರ ನೂರಾರು ಮಂದಿ ತೆರಳಿದರು.
ಜಿಲ್ಲೆಯಲ್ಲಿ ಕನ್ನಡಿಗರನ್ನು ಜಾಗೃತಿಗೊಳಿಸುವುದರ ಜೊತೆಗೆ ಜಿಲ್ಲೆಯ ಸಮಗ್ರ ಅಭಿವೃದ್ಧಿಯನ್ನು ಗುರಿಯಾಗಿರಿಸಿಕೊಂಡು ಕನ್ನಡ ರಕ್ಷಣಾ ವೇದಿಕೆಯನ್ನು ಪ್ರಭಲವಾಗಿ ಸಂಘಟಿಸಲು ಕ.ರ.ವೇ ರಾಜ್ಯಾಧ್ಯಕ್ಷ ಟಿ.ಎಂ.ನಾರಾಯಣಗೌಡರ ನಾಯಕತ್ವದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ತೆರಳುತ್ತಿದ್ದೇವೆ. ಜಿಲ್ಲೆಯ ಜನರ ಸಮಸ್ಯೆಯನ್ನು ನೀಗಿಸಲು ಶಾಶ್ವತ ನೀರಾವರಿ ಯೋಜನೆಗೆ ಒತ್ತಾಯ ಸೇರಿದಂತೆ ನಮ್ಮ ಜಿಲ್ಲೆಯ ಅಭಿವೃದ್ಧಿಗಾಗಿ ಕ.ರ.ವೇ ಮೂಲಕ ಶ್ರಮಿಸಲಿದ್ದೇವೆ ಎಂದು ಕ.ರ.ವೇ ತಾಲ್ಲೂಕು ಅಧ್ಯಕ್ಷ ಎಂ.ವೆಂಕಟರಮಣಪ್ಪ ಈ ಸಂದರ್ಭದಲ್ಲಿ ತಿಳಿಸಿದರು.
ಕ.ರ.ವೇ ತಾಲ್ಲೂಕು ಗೌರವಾಧ್ಯಕ್ಷ ರಾಮಣ್ಣ, ರವಿಕುಮಾರ್, ಮುನಿರಾಜ್, ದೇವರಾಜ್, ಶಿವಣ್ಣ, ವಿಜಯ್, ನಾರಾಯಣಸ್ವಾಮಿ, ಚಂದ್ರು, ನೂರುಲ್ಲಾ ಮತ್ತಿತರರು ಈ ಸಂದರಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -