26.1 C
Sidlaghatta
Thursday, June 1, 2023

ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಎನ್.ಶಿವಣ್ಣ

- Advertisement -
- Advertisement -

ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಎನ್.ಶಿವಣ್ಣ ಅವರನ್ನು ಆಯ್ಕೆ ಮಾಡಿ ಕನ್ನಡ ಸಾಹಿತ್ಯ ಪರಿಷತ್ನ ತಾಲ್ಲೂಕು ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ನಗರದ ನಗರ್ತಪೇಟೆಯ ಕಾಳಿಕಾಂಬ ಕಮ್ಮಠೇಶ್ವರ ಸಮುದಾಯಭವನದಲ್ಲಿ ಗುರುವಾರ ಸಂಜೆ ನಡೆದ ಕಸಾಪ ಸಭೆಯಲ್ಲಿ ಸಿಟಿಜನ್ ಡಿಎಡ್ ಕಾಲೇಜಿನ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿರುವ ಎನ್.ಶಿವಣ್ಣ ಅವರನ್ನು ೫ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.
11jul1ಈ ತಿಂಗಳ ೨೯ರ ಸೋಮವಾರ ನಗರದ ವಾಸವಿ ಕಲ್ಯಾಣ ಮಂಟಪದಲ್ಲಿ ಒಂದು ದಿನದ ಮಟ್ಟಿಗೆ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಲು ನಿರ್ಧರಿಸಿ, ಸಮ್ಮೇಳನದ ಸಿದ್ಧತೆ, ಕಾರ್ಯಕ್ರಮಗಳ ರೂಪು ರೇಷೆಗಳು, ಅಂದಾಜು ವೆಚ್ಚ ಹಾಗೂ ಅದನ್ನು ಸರಿದೂಗಿಸುವ ಬಗೆ ಕುರಿತು ಚರ್ಚಿಸಲಾಯಿತು.
ಶೀಘ್ರದಲ್ಲೆ ಶಾಸಕರ ನೇತೃತ್ವದಲ್ಲಿ ತಾಲ್ಲೂಕಿನ ಎಲ್ಲ ಇಲಾಖೆಗಳ ಅಧಿಕಾರಿಗಳ ಸಭೆ ಕರೆದು ಸಮ್ಮೇಳನದ ಕಾರ್ಯ ಕಲಾಪ, ರೂಪು ರೇಷೆ ಹಾಗೂ ವಂತಿಗೆ ಸಂಗ್ರಹ ಕುರಿತು ಸಭೆ ನಡೆಸಲಾಗುವುದು. ಆ ನಂತರ ಸಮ್ಮೇಳನದ ಅಂದಾಜು ಖರ್ಚು ವೆಚ್ಚಗಳನ್ನು ನಿರ್ಧರಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸುವ ಬಗ್ಗೆ ಚರ್ಚಿಸಿ ಕೃಷಿ, ಪರಿಸರ, ವೈದ್ಯಕೀಯ, ಸಾಹಿತ್ಯ, ಪತ್ರಿಕಾ ರಂಗ, ಸಾಮಾಜಿಕ ಸೇವೆ, ಸಾರ್ವಜನಿಕ ಸೇವೆ ಮುಂತಾದ ಹತ್ತು ಕ್ಷೇತ್ರಗಳಲ್ಲಿ ಸಾಧಕರನ್ನು ಸನ್ಮಾನಿಸಲು ಸಲಹೆಗಳನ್ನು ನೀಡಲಾಯಿತು.
ಕಸಾಪ ಅಧ್ಯಕ್ಷ ಕೃ.ನಾ.ಶ್ರೀನಿವಾಸ್, ಜಿಲ್ಲಾ ನಿಕಟಪೂರ್ವ ಅಧ್ಯಕ್ಷ ಎಸ್.ವಿ.ನಾಗರಾಜ್ರಾವ್, ವಿ.ಕೃಷ್ಣ, ಕೆ.ಎಂ.ವಿನಾಯಕ, ಎಂ.ಕೆಂಪಣ್ಣ, ವೈ.ಎನ್.ದಾಶರಥಿ, ಜಯಶ್ರೀ, ರಾಮಕೃಷ್ಣ, ಎಂ.ವೆಂಕಟೇಶಪ್ಪ, ಟಿ.ನಾರಾಯಣಸ್ವಾಮಿ, ಕೇದಾರನಾಥ್, ಚನ್ನಕೃಷ್ಣ, ಚಿಕ್ಕವೆಂಕಟರಾಯಪ್ಪ, ಸುಂದರಾಚಾರಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.
Captcha verification failed!
CAPTCHA user score failed. Please contact us!
error: Content is protected !!