ಶಿಕ್ಷಣ ಇಲಾಖೆ ವಿದ್ಯಾರ್ಥಿಗಳನ್ನು ಸರ್ವತೋಮುಖ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಕಲಿಕೆಗೆ ಪೂರಕ ವಾತಾವರಣ ಕಲ್ಪಿಸಲು ಕಲಿಕೋತ್ಸವ ಕಾರ್ಯಕ್ರಮ ನಡೆಸುತ್ತಿದೆ. ಮಕ್ಕಳಲ್ಲಿನ ಕಲಿಕೆ ಮತ್ತು ಕಲಿಕೆಯ ಖಾತರಿಯನ್ನು ಹಬ್ಬದ ರೀತಿಯಲ್ಲಿ ಆಚರಿಸುವುದೆ ಕಲಿಕೋತ್ಸವವಾಗಿದೆ. ಶಿಕ್ಷಕರು ಮಕ್ಕಳಿಗೆ ಕಲಿಕೆಯ ಜತೆಗೆ ಉತ್ತಮ ಮೌಲ್ಯಗಳನ್ನು ಬಿತ್ತಬೇಕು ಎಂದು ನಿವೃತ್ತ ಅಕ್ಷರ ದಾಸೋಹ ನಿರ್ದೇಶಕ ರಂಗಪ್ಪ ತಿಳಿಸಿದರು.
ತಾಲ್ಲೂಕಿನ ಹಳೇಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ನಡೆದ ಈ.ತಿಮ್ಮಸಂದ್ರ ಕ್ಲಸ್ಟರ್ ಮಟ್ಟದ ಕಲಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಕಲಿಕೆ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಬೇಕು. ಮಕ್ಕಳಲ್ಲಿ ಅಡಗಿರುವ ವಿವಿಧ ಪ್ರತಿಭೆ ಗುರುತಿಸಲು ಈ ರೀತಿಯ ಕಾರ್ಯಕ್ರಮಗಳು ಅವಶ್ಯಕ. ಶಿಕ್ಷಕರು ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿ ಅವರಲ್ಲಿ ಆತ್ಮವಿಶ್ವಾಸ ತುಂಬಬೇಕು ಎಂದು ಹೇಳಿದರು.
ಪಠ್ಯಪುಸ್ತಕ ಆಧಾರಿತ ಕ್ರಮದಲ್ಲಿ ಈ ಕಲಿಕೋತ್ಸವ ನಡೆಸಲಾಗುತ್ತಿದ್ದು ಗುಣಾತ್ಮಕ ಉತ್ಕೃಷ್ಟ ಕಲಿಕೆಯಿಂದ ಸರ್ಕಾರಿ ಶಾಲೆಗಳನ್ನು ಆಕರ್ಷಿಸುವ ಇಲಾಖೆಯ ವಿನೂತನ ಕಾರ್ಯಕ್ರಮವಾಗಿದೆ. ಮಕ್ಕಳ ಕಲಿಕೆಗೆ ಇದು ಪೂರಕವಾಗಿದ್ದು ಶಾಲೆಗಳ ಕಲಿಕಾ ಸಾಧನೆಗಳಿಗೆ ಪಾರದರ್ಶಕತೆ ತರಲು ಮಕ್ಕಳ ಸಾಧನೆ ಸ್ಪಷ್ಟಪಡಿಸಲು ಇದು ಸಹಾಯಕವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ನಿವೃತ್ತ ಅಕ್ಷರ ದಾಸೋಹ ನಿರ್ದೇಶಕ ರಂಗಪ್ಪ ಅವರನ್ನು ಶಿಕ್ಷಕ ವೃಂದದವರು ಸನ್ಮಾನಿಸಿದರು.
ಸಿಆರ್ಪಿ ಶಿವಪ್ಪ, ಶಿಕ್ಷಕರಾದ ಬಿ.ಆರ್.ನಾರಾಯಣಸ್ವಾಮಿ, ಸುಬ್ಬಣ್ಣ, ಎಂ.ಕೆ.ರೆಡ್ಡಿ, ರಾಮಚಂದ್ರ, ಎಂ.ವಿ.ಮಂಜುನಾಥ್, ಮುಜಾಫರ್ ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -
- Advertisement -