ಕುವೆಂಪು ಶತಮಾನೋತ್ಸವ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ‘ಪುಸ್ತಕ ವಾಚನೋತ್ಸವ’ ಕಾರ್ಯಕ್ರಮ

- Advertisement -
- Advertisement -

ತಾಲ್ಲೂಕಿನ ಚೀಮಂಗಲದ ಕುವೆಂಪು ಶತಮಾನೋತ್ಸವ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ‘ಪುಸ್ತಕ ವಾಚನೋತ್ಸವ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕುವೆಂಪು ಜನ್ಮದಿನದ ಅಂಗವಾಗಿ ಕನ್ನಡ ಪುಸ್ತಕ ಪ್ರಾಧಿಕಾರ ಮತ್ತು ಜಂಗಮಕೋಟೆಯ ‘ನಮ್ಮುಡುಗ್ರು ಬಳಗ’ದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದಲ್ಲಿ ತಾಲ್ಲೂಕಿನ ವಿವಿಧ ಗ್ರಾಮಗಳ ೨೦ಕ್ಕೂ ಹೆಚ್ಚು ಕಿರಿಯ, ಹಿರಿಯ ಪ್ರಾಥಮಿಕ ಶಾಲೆಗಳ ಮಕ್ಕಳು ಭಾಗವಹಿಸಿದ್ದರು. ಆಯ್ದ ಪುಸ್ತಕಗಳನ್ನು ಓದಿ ಅದರ ಅರ್ಥವನ್ನು ವಿವರಿಸುವುದು ಹಾಗೂ ಆ ನಂತರ ಅದರ ಮೇಲೆಯ ರಸಪ್ರಶ್ನೆಯ ಕಾರ್ಯಕ್ರಮ ನಡೆಯಿತು.
ಹಿರಿಯ ಪ್ರಾಥಮಿಕ ಶಾಲೆಗಳ ಪುಸ್ತಕ ವಾಚನ ವಿಭಾಗದಲ್ಲಿ ಆನೂರು ಸರಕಾರಿ ಶಾಲೆ(ಪ್ರಥಮ), ಜಂಗಮಕೋಟೆ ತೋಟಗಳ ಸರಕಾರಿ ಶಾಲೆ(ದ್ವಿತೀಯ) ಹಾಗೂ ತೃತೀಯ ಸ್ಥಾನವನ್ನು ಯಣ್ಣೂರು ಶಾಲೆಯ ಮಕ್ಕಳು ಪಡೆದರು.
ಕಿರಿಯ ಪ್ರಾಥಮಿಕ ಶಾಲೆಗಳ ವಿಭಾಗದಲ್ಲಿ ಜಂಗಮಕೋಟೆ ತೋಟದ ಶಾಲೆ(ಪ್ರಥಮ), ವರದನಾಯಕನಹಳ್ಳಿಯ ಶಾಲೆ(ದ್ವಿತೀಯ) ಹಾಗೂ ಯಣ್ಣೂರಿನ ಶಾಲೆ ತೃತೀಯ ಬಹುಮಾನ ಪಡೆಯಿತು.
ಮುಖ್ಯ ಶಿಕ್ಷಕ ಶಿವಶಂಕರ್, ಚೀಮಂಗಲ ಗ್ರಾಮ ಪಂಚಾಯತಿ ಅಧ್ಯಕ್ಷ ಈಶ್ವರ್, ಎಸ್ಡಿಎಂಸಿ ಅಧ್ಯಕ್ಷ ಎಂ.ಮಂಜುನಾಥ್, ಸದಸ್ಯ ಪಿ.ಬಿ.ಕೃಷ್ಣಪ್ಪ, ಸಿ.ಕೆ.ಮಂಜುನಾಥ್, ನಮ್ಮುಡಗ್ರು ಬಳಗದ ವಿಜಯಕುಮಾರ್, ಮೋಹನ್, ಸಹಶಿಕ್ಷಕರಾದ ರಾಜೀವ್ಗೌಡ, ನಾಗೇಶ್, ನಾಗವೇಣಿ, ಮಮತ, ಲಕ್ಷ್ಮಿ, ಶ್ರೀನಿವಾಸ್, ವೆಂಕಟೇಶ್, ತೀರ್ಪುಗಾರರಾಗಿ ಶ್ರೀಕಂಠ, ಪ್ರಶಾಚಿತ್, ಸವಿತ, ಪ್ರವೀಣ್, ಸುರೇಶ್ ಮತ್ತಿತರರು ಹಾಜರಿದ್ದರು.

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -
Sidlaghatta News Desk
Sidlaghatta News Deskhttp://www.sidlaghatta.com
The editorial desk of Sidlaghatta.com (Namma Shidlaghatta), covering civic affairs, agriculture, silk trade, and local government news for Sidlaghatta taluk, Karnataka.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!