21.3 C
Sidlaghatta
Wednesday, July 16, 2025

ಕೃಷ್ಣ ಜಯಂತಿಯ ಪೂರ್ವಭಾವಿ ಬಹಿಷ್ಕರಿಸಿದ ಯಾದವ ಸಂಘದ ಸದಸ್ಯರು

- Advertisement -
- Advertisement -

ಕೃಷ್ಣ ಜಯಂತಿಯನ್ನು ತಾಲ್ಲೂಕು ಕಚೇರಿಯ ಸಾಭಾಂಗಣದಲ್ಲಿ ಆಗಸ್ಟ್‌ 14 ರಂದು ಸರಳವಾಗಿ ಆಚರಿಸುವುದಾಗಿ ತಹಶೀಲ್ದಾರ್‌ ಅಜಿತ್‌ಕುಮಾರ್‌ ರೈ ತಿಳಿಸಿದರು.
ನಗರದ ತಾಲ್ಲೂಕು ಕಚೇರಿಯಲ್ಲಿ ಶನಿವಾರ ಕೃಷ್ಣಜಯಂತಿ ಆಚರಣಾ ಅಂಗವಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಆಗಸ್ಟ್‌ 15 ರಂದು ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮವಿದ್ದು, ಸರ್ಕಾರದಿಂದ ಬರುವ ಅನುದಾನ 25 ಸಾವಿರ ರೂಗಳ ಮಿತಿಯಲ್ಲಿ ಸರಳವಾಗಿ ಕೃಷ್ಣ ಜಯಂತಿ ಆಚರಿಸಬಹುದಾಗಿದೆ. ಯಾದವ ಸಂಘದ ವತಿಯಿಂದ ಅದ್ದೂರಿಯಾಗಿ ಆಚರಿಸಿದರೂ ಸ್ವಾಗತಾರ್ಹ ಎಂದರು.
ಯಾದವ ಸಂಘದ ಅಧ್ಯಕ್ಷ ಕೇಶವಮೂರ್ತಿ ಮಾತನಾಡಿ, ಕಳೆದ ಬಾರಿಯಂತೆ ಕೃಷ್ಣಜಯಂತಿಯನ್ನು ಅದ್ದೂರಿಯಾಗಿ ಆಚರಿಸಬೇಕು. ಇಲ್ಲದಿದ್ದಲ್ಲಿ ಸರ್ಕಾರಿ ಕಾರ್ಯಕ್ರಮದಲ್ಲಿ ನಮ್ಮ ಜನಾಂಗದವರು ಭಾಗವಹಿಸುವುದಿಲ್ಲ. ನಮ್ಮ ಕೃಷ್ಣ ದೇವಸ್ಥಾನದ ಬಳಿ ಕೃಷ್ಣ ಜಯಂತಿಯನ್ನು ಆಚರಿಸುತ್ತೇವೆ ಎಂದು ಹೇಳಿ ಸಭೆಯನ್ನು ಬಹಿಷ್ಕರಿಸಿ ಹೊರನಡೆದರು.
ಸಭೆಯಲ್ಲಿ ಗೈರು ಹಾಜರಿದ್ದ ಅಧಿಕಾರಿಗಳಿಗೆ ನೋಟಿಸ್‌ ಜಾರಿ ಮಾಡುವುದಾಗಿ ತಹಶೀಲ್ದಾರ್‌ ತಿಳಿಸಿದರು.
ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಣಾಧಿಕಾರಿ ವೆಂಕಟೇಶ್‌, ಸಬ್‌ ಇನ್ಸ್‌ಪೆಕ್ಟರ್‌ ನವೀನ್‌, ಯಾದವ ಸಂಘದ ಕೇಶವಮೂರ್ತಿ, ಅಶ್ವತ್ಥಪ್ಪ, ಟಿ.ಕೆ.ನಟರಾಜ್‌, ನರಸಿಂಹಮೂರ್ತಿ, ಶ್ರೀನಿವಾಸ್‌ ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!