ತಾಲ್ಲೂಕಿನ ಕೋಟಹಳ್ಳಿ ಗ್ರಾಮದಲ್ಲಿ ಚನ್ನಕೇಶವಸ್ವಾಮಿ ಪ್ರತಿಷ್ಠಾಪನಾ ಮಹೋತ್ಸವವನ್ನು ಮೂರು ದಿನಗಳ ಕಾಲ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಸೋಮವಾರದಿಂದ ಪ್ರಾರಂಭವಾದ ಪೂಜಾ ಮಹೋತ್ಸವವು ಬುಧವಾರ ಬೆಳಿಗ್ಗೆಯಿಂದ ವಿಶ್ವಕ್ಸೇನಾರಾಧನೆ, ಪುಣ್ಯಾಹವಾಚನ, ಅಗ್ನಿಪ್ರಣಯ, ಕುಂಭಾರಾಧನೆ, ಉಕ್ತಹೋಮ, ಪೂರ್ಣಾಹುತಿ, ಕುಂಭ ಉದ್ವಾಸನೆ, ಆಲಯ ಪ್ರದಕ್ಷಿಣೆ, ಪೂರ್ವಕ ದೇವಾಲಯ ಪ್ರವೇಶ, ಗೋದರ್ಶನ, ಕನ್ಯಾದರ್ಶನ, ಅಕ್ಷತಾರೋಹಣ, ಅಷ್ಠಾವಧಾನಸೇವೆ ನಂತರ ಮಹಾಮಂಗಳಾರತಿ ಹಾಗೂ ತೀರ್ಥಪ್ರಸಾದ ವಿನಿಯೋಗ ನಡೆಸಲಾಯಿತು.
ಸಂಜೆ ಗ್ರಾಮದಲ್ಲಿ ಚನ್ನಕೇಶವಸ್ವಾಮಿ ಉತ್ಸವ ಹಾಗೂ ಗ್ರಾಮದ ಮಕ್ಕಳಿಂದ ಪಂಡರಿಭಜನೆ ಆಯೋಜಿಸಲಾಗಿತ್ತು.
ವಿವಿದೆಡೆಗಳಿಂದ ಆಗಮಿಸಿದ್ದ ಭಕ್ತರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -







