27.1 C
Sidlaghatta
Friday, March 29, 2024

ಚುನಾವಣೆ ಬಹಿಷ್ಕಾರ ಮಾಡುವಂತೆ ಬೈಕ್ ರ್ಯಾಲಿ

- Advertisement -
- Advertisement -

ಜೂನ್ ೨ ರಂದು ನಡೆಯಲಿರುವ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ನಾಮಪತ್ರಗಳನ್ನು ಸಲ್ಲಿಸದೆ, ಮತದಾನ ಮಾಡದೆ ಎಲ್ಲಾ ಜನರು ಒಗ್ಗಟ್ಟಿನಿಂದ ಚುನಾವಣೆ ಬಹಿಷ್ಕಾರ ಮಾಡುವಂತೆ ಮನವೊಲಿಸುವಂತಹ ಕೆಲಸಗಳು ಆರಂಭವಾಗಿದೆ.
ತಾಲ್ಲೂಕಿನ ಅಬ್ಲೂಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಹಳ್ಳಿಗಳಲ್ಲಿ ಬೈಕ್ ರ್ಯಾಲಿಯ ಮುಖಾಂತರ ಶುಕ್ರವಾರ ತೆರಳಿದ ಅಬ್ಲೂಡು ಪಂಚಾಯತಿಯ ಗ್ರಾಮಸ್ಥರು ಹಾಗೂ ಮುಖಂಡರು, ಬಯಲು ಸೀಮೆ ಭಾಗಗಳಿಗೆ ನೀರಾವರಿ ಸೌಲಭ್ಯಗಳನ್ನು ಕಲ್ಪಿಸುವ ತನಕ ಚುನಾವಣೆಗಳನ್ನು ಬಹಿಷ್ಕರಿಸುವಂತೆ ಜನತೆಯಲ್ಲಿ ಮನವಿ ಮಾಡಿದರು.
ಪ್ರತಿಯೊಂದು ಚುನಾವಣೆಗಳಲ್ಲಿ ನೀರಾವರಿ ಯೋಜನೆಯನ್ನೆ ಅಜೆಂಡವನ್ನಾಗಿ ಮಾಡಿಕೊಳ್ಳುತ್ತಿರುವ ಜನಪ್ರತಿನಿಧಿಗಳು ಹಾಗೂ ರಾಜಕೀಯ ಮುಖಂಡರುಗಳು ಬಯಲು ಸೀಮೆ ಭಾಗದ ಜನತೆಯನ್ನು ದಿಕ್ಕುತಪ್ಪಿಸಿ, ನಮಗೆ ಮಂಕು ಬೂದಿಯನ್ನು ಎರಚುವಂತಹ ಕೆಲಸವನ್ನು ಮಾಡುತ್ತಿದ್ದಾರೆ, ನಾವು ಬದುಕಲು ನೀರು ಕೊಡಲು ಸಾಧ್ಯವಾಗದಿರುವ ಸರ್ಕಾರಗಳ ಮೇಲೆ ಯಾವ ರೀತಿಯಾದ ನಂಬಿಕೆಯನ್ನು ಇಡಬೇಕು, ಚುನಾವಣೆಗಳಲ್ಲಿ ಮತದಾನ ಮಾಡಿ ನಮಗೇನು ಬರಬೇಕು, ಮೊದಲು ನಾವು ಉಳಿಯಬೇಕು, ನಮ್ಮ ಜಾನುವಾರುಗಳು ಉಳಿಯಬೇಕು, ನಮ್ಮ ಭಾಗದ ಭೂಮಿಗಳಲ್ಲಿ ಹಸಿರು ಕಾಣಿಸಬೇಕು ಆಗಲೇ ಚುನಾವಣೆಗಳಿಗೆ ಅರ್ಥವಿದೆ, ಎಷ್ಟು ಚುನಾವಣೆಗಳು ನಡೆದರೂ ಕೂಡಾ ನಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗದಿದ್ದ ಮೇಲೆ ಸ್ಥಳೀಯ ಆಡಳಿತ ಸಂಸ್ಥೆಗಳ ಅಗತ್ಯತೆಯೂ ನಮಗಿಲ್ಲ, ಈ ಚುನಾವಣೆ ಮಾತ್ರವಲ್ಲ, ಮುಂಬರುವ ತಾಲ್ಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿ ಚುನಾವಣೆಗಳನ್ನೂ ಬಹಿಷ್ಕಾರ ಮಾಡುವಂತೆ ಮನವೊಲಿಸುತ್ತಿರುವ ನಾಗರೀಕರು, ಕ್ಷೇತ್ರದ ಎಲ್ಲಾ ಜನತೆಯು ಕೂಡಾ ಈ ಭಾಗದ ಉಳಿವಿಗಾಗಿ ಸಹಕಾರ ನೀಡುವಂತೆ ಮನವಿ ಮಾಡಿದರು.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!