19.1 C
Sidlaghatta
Wednesday, February 18, 2026

ದ್ರಾಕ್ಷಿ ಮತ್ತು ಹಿಪ್ಪುನೇರಳೆ ತೋಟಗಳು ನಾಶ

- Advertisement -
- Advertisement -

ತಾಲ್ಲೂಕಿನಾದ್ಯಂತ ಕಳೆದ ಎರಡು ದಿನಗಳಿಂದ ಬೀಳುತ್ತಿರುವ ಅಕಾಲಿಕ ಮಳೆಯು ದ್ರಾಕ್ಷಿ ಮತ್ತು ರೇಷ್ಮೆ ಬೆಳೆಗಾರರನ್ನು ಕಂಗಾಲಾಗಿಸಿದ್ದು ಅಪಾರ ಪ್ರಮಾಣದ ದ್ರಾಕ್ಷಿ ಮತ್ತು ಹಿಪ್ಪುನೇರಳೆ ತೋಟಗಳು ನಷ್ಟಕ್ಕಿಡಾಗಿವೆ.
ತಾಲ್ಲೂಕಿನ ವರದನಾಯಕನಹಳ್ಳಿ ಗ್ರಾಮದಲ್ಲಿ ರೈತರಾದ ರಾಮಯ್ಯ, ಸುಗುಣ, ವಿ.ಎಸ್.ವೆಂಕಟೇಶಪ್ಪ, ಹನುಮೇಗೌಡ, ಮುನಿಕೆಂಪಣ್ಣ ಎಂಬ ರೈತರುಗಳ ತೋಟಗಳಲ್ಲಿ ಬೆಳೆದಿದ್ದ ಸುಮಾರು ೮ ಲಕ್ಷ ರೂಪಾಯಿಗಳಷ್ಟು ಬೆಲೆ ಬಾಳುವ ದ್ರಾಕ್ಷಿಬೆಳೆ ಆಲಿಕಲ್ಲಿನ ಮಳೆಗೆ ತುತ್ತಾಗಿದೆ. ಸುಮಾರು ೧೦ ಎಕೆರೆ ಪ್ರದೇಶದಷ್ಟು ಹಿಪ್ಪುನೇರಳೆ ತೋಟಗಳೂ ಕೂಡಾ ಮಳೆಗೆ ಆಹುತಿಯಾಗಿದ್ದು, ಸುಮಾರು ೧ ಲಕ್ಷ ರೂಪಾಯಿಗಳಷ್ಟು ಬೆಳೆ ನಷ್ಟವಾಗಿದೆ, ಹಾನಿಯಾಗಿರುವ ತೋಟಗಳಿಗೆ ಬೇಟಿ ನೀಡಿದ್ದ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಆನಂದ್ ಮತ್ತು ರೇಷ್ಮೆ ಕೃಷಿ ವಿಸ್ತರಣಾಧಿಕಾರಿ ನಾರಾಯಣಸ್ವಾಮಿ ತೋಟಗಳನ್ನು ಪರಿಶೀಲನೆ ನಡೆಸಿದ್ದಾರೆ, ಬೆಳೆಗಳು ನಷ್ಟವಾಗಿರುವ ಬಗ್ಗೆ ವರದಿಯನ್ನು ತಯಾರಿಸಿ, ತಹಶೀಲ್ದಾರರಿಗೆ ಸಲ್ಲಿಸಲಾಗುತ್ತದೆ, ತಹಶೀಲ್ದಾರರ ಕಡೆಯಿಂದ ರೈತರಿಗೆ ಪರಿಹಾರವನ್ನು ವಿತರಣೆ ಮಾಡಲಾಗುತ್ತದೆ ಎಂದು ಆನಂದ್ ತಿಳಿಸಿದ್ದಾರೆ.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!