ಶಿಡ್ಲಘಟ್ಟದ ನಂದಮೂರಿ ಬಾಲಕೃಷ್ಣ ಅಭಿಮಾನಿಗಳ ಸಂಘದ ವತಿಯಿಂದ ಶುಕ್ರವಾರ ನಟ ಬಾಲಕೃಷ್ಣ ಅವರ 56 ನೇ ಹುಟ್ಟುಹಬ್ಬವನ್ನು ಬಸ್ ನಿಲ್ದಾಣದ ಬಳಿಯ ಸಲ್ಲಾಪುರಮ್ಮ ದೇವಾಲಯದ ಮುಂದೆ ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು. ಸಾರ್ವಜನಿಕ ಆಸ್ಪತ್ರೆಯಲ್ಲಿ ಹಣ್ಣು ವಿತರಣೆ, ಅಂಧ ಮಕ್ಕಳ ಶಾಲೆಯಲ್ಲಿ ಅನ್ನಸಂತರ್ಪಣೆ ಮಾಡಿದರು. ಶ್ರೀರಾಮಪ್ಪ, ಶ್ರೀನಿವಾಸ್, ಕೃಷ್ಣ, ನಾಗ, ಮುನಿಕೃಷ್ಣ, ನಾರಾಯಣಸ್ವಾಮಿ, ಮೂರ್ತಿ, ಸುನಿಲ್, ಗೋಪಾಲ್, ರಾಮಾಂಜಿ, ಛಲಪತಿ ಹಾಜರಿದ್ದರು.
- Advertisement -