ನಾಯಿಗಳ ಧಾಳಿಗೆ ಸಿಕ್ಕು ತಾಲ್ಲೂಕಿನ ಸೊಣ್ಣೇನಹಳ್ಳಿಯ ಮಾಸಪ್ಪನವರ ಆಂಜಿನಪ್ಪನವರ ಮನೆಯ ಆವರಣದಲ್ಲಿನ ಕುರಿ ದೊಡ್ಡಿಯಲ್ಲಿದ್ದ ನಾಲ್ಕು ಕುರಿಗಳು ಹಾಗೂ ಒಂದು ಮರಿ ಮೃತಪಟ್ಟಿದ್ದರೆ ೧೪ ಕುರಿಗಳು ಗಂಭೀರವಾಗಿ ಗಾಯಗೊಂಡಿದ್ದು ಉಳಿದುಕೊಳ್ಳುವುದು ಅನುಮಾನವಾಗಿದೆ.
ಕುರಿಗಳ ಮಾಲೀಕ ರೈತನಿಗೆ ಲಕ್ಷ ರೂಪಾಯಿಗೂ ಅಧಿಕ ನಷ್ಟವಾಗಿದೆ. ಆಂಜಿನಪ್ಪನವರ ಕುಟುಂಬದವರೆಲ್ಲರೂ ತಮ್ಮ ಬಂಧುವೊಬ್ಬರ ಮಕ್ಕಳ ಹೂ ಮುಡಿಸುವ ಕಾರ್ಯಕ್ರಮಕ್ಕೆಂದು ಹೋಗಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಮಾರುಕಟ್ಟೆಯಲ್ಲಿ ೨ ವರ್ಷದ ಕುರಿಯೊಂದಕ್ಕೆ ೬-–೧೦ ಸಾವಿರ ರೂ ಬೆಲೆ ಇದ್ದು ಅದರಂತೆ ರೈತನಿಗೆ ೧ ಲಕ್ಷಕ್ಕೂ ಅಧಿಕ ನಷ್ಟವಾಗಿದೆ. ಪಶು ವೈಧ್ಯ ಇಲಾಖೆಯ ಸಹಾಯಕ ನಿರ್ದೆಶಕ ಡಾ.ಮುನಿನಾರಾಯಣರೆಡ್ಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -