ತಾಲ್ಲೂಕಿನ ಹೊಸಪೇಟೆ ಗ್ರಾಮ ಪಂಚಾಯತಿಯ ಜಂಗಮಕೋಟೆ ಕ್ರಾಸ್ನಲ್ಲಿ ರಾಜೀವ್ಗಾಂಧಿ ವಸತಿ ಯೋಜನೆಯಡಿ ನಿರ್ಮಾಣವಾಗುತ್ತಿದ್ದ ಸುನೀತಾ ಪ್ರಸನ್ನಕುಮಾರ್ ಅವರ ಮನೆಯನ್ನು ಕೆಲ ವ್ಯಕ್ತಿಗಳು ಜಖಂಗೊಳಿಸಿರುವ ಘಟನೆ ಬುಧವಾರ ನಡೆದಿದೆ.
ಜಂಗಮಕೋಟೆ ಕ್ರಾಸ್ನಲ್ಲಿ ವಿಜಯಲಕ್ಷ್ಮಿ ಎಂಬುವರಿಂದ ಸುನೀತಾ ಪ್ರಸನ್ನಕುಮಾರ್ ಅವರು ಸ್ಥಳವನ್ನು ಖರೀದಿ ಮಾಡಿದ್ದು, ನಿವೇಶನವನ್ನು ನಿರ್ಮಿಸಲು ಗ್ರಾಮ ಪಂಚಾಯತಿಯಿಂದ ರಾಜೀವ್ಗಾಂಧಿ ವಸತಿ ಯೋಜನೆಯಡಿ ಹಣ ಮಂಜೂರು ಮಾಡಿಸಿಕೊಂಡಿದ್ದರು.
‘ಮೊದಲನೇ ಕಂತಿನ ಹಣ ಇವರ ಖಾತೆಗೆ ಜಮಾ ಆಗಿ ಕಿಟಕಿ, ಬಾಗಿಲುಗಳನ್ನಿಟ್ಟು ಲಿಂಟಲ್ ಮಟ್ಟದವರೆಗೂ ಕಾಮಗಾರಿ ನಡೆದಿತ್ತು. ಬುಧವಾರ ಮಳಮಾಚನಹಳ್ಳಿ ಗ್ರಾಮ ಪಂಚಾಯತಿ ಸದಸ್ಯರೊಬ್ಬರು ಗುಂಪುಕಟ್ಟಿಕೊಂಡು ಬಂದು ನಿರ್ಮಿಸುತ್ತಿದ್ದ ಕಟ್ಟಡವನ್ನು ಒಡೆದುಹಾಕಿದ್ದಾರೆ. ಈ ಸ್ಥಳ ನಮ್ಮದೆಂದು ದೌರ್ಜನ್ಯವೆಸಗಿದ್ದಾರೆ’ ಎಂದು ಪ್ರಸನ್ನಕುಮಾರ್ ತಿಳಿಸಿದ್ದಾರೆ.
‘ಈ ಸ್ಥಳಕ್ಕೆ ಸಂಬಂಧಿಸಿದಂತೆ ಎಲ್ಲಾ ದಾಖಲೆ ಪತ್ರಗಳನ್ನು ಪರಿಶೀಲನೆ ಮಾಡಿಯೇ ಗ್ರಾಮ ಪಂಚಾಯತಿ ವತಿಯಿಂದ ನಮಗೆ ನಿವೇಶನ ನಿರ್ಮಿಸಲು ಹಣ ಮಂಜೂರಾಗಿದೆ. ಕಟ್ಟುತ್ತಿರುವ ಕಟ್ಟಡವನ್ನು ನಾಶ ಮಾಡಿ ದೌರ್ಜನ್ಯವೆಸಗಿ ನಷ್ಟವನ್ನುಂಟು ಮಾಡಿದ್ದಾರೆ. ನಮಗೆ ನಷ್ಟ ಪರಿಹಾರವನ್ನು ಕೊಡಿಸಿ ಸೂಕ್ತ ರಕ್ಷಣೆ ನೀಡಬೇಕೆಂದು ಗ್ರಾಮಾಂತರ ಠಾಣೆಯಲ್ಲಿ ದೂರನ್ನು ಸಲ್ಲಿಸಿದ್ದೇವೆ’ ಎಂದು ಅವರು ಹೇಳಿದರು.
- Advertisement -
- Advertisement -
- Advertisement -
- Advertisement -