ನಗರದ ನೆಹರೂ ಕ್ರೀಡಾಂಗಣ ಅವ್ಯವಸ್ಥೆಗಳ ಆಗರವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕ್ರೀಡಾಪಟುಗಳು ಒತ್ತಾಯಿಸಿದ್ದಾರೆ.
ಕ್ರೀಡಾಂಗಣ ಪ್ರವೇಶದ್ವಾರದ ಬಳಿ ಸಾಕಷ್ಟು ನೀರು ನಿಂತಿದ್ದು, ಕಲುಶಿತ ವಾತಾವರಣವಿದೆ. ಬೆಳಿಗ್ಗೆ ವಾಕಿಂಗ್ ಬರುವವರು, ಕ್ರೀಡಾಪಟುಗಳಿಗೆ ನಾಯಿಗಳ ಕಾಟ ವಿಪರೀತವಾಗಿದೆ. ಕಳೆ ಗಿಡಗಳು ಸಾಕಷ್ಟು ಬೆಳೆದಿದ್ದು, ಹಾವುಗಳು ಸೇರಿಕೊಳ್ಳುವ ಅಪಾಯವೂ ಇದೆ. ಲಾಂಗ್ ಜಂಪ್ ತರಬೇತಿ ಪಡೆಯುವಲ್ಲಿ ನೀರು ನಿಂತಿದ್ದು, ಕ್ರೀಡಾಪಟುಗಳಿಗೆ ತೊಂದರೆಯಾಗಿದೆ. ಈಚೆಗಷ್ಟೆ ನಾಯಿಯೊಂದು ಕಳೆಗಿಡಗಳ ನಡುವೆ ಸತ್ತಿದ್ದು, ಯಾರೂ ಅದನ್ನು ತೆಗೆಸದೆ ಕೆಟ್ಟ ವಾಸನೆ ಬೀರುತ್ತಿದೆ. ಕ್ರೀಡಾಂಗಣದ ಅಭಿವೃದ್ಧಿಗಾಗಿ ಒಂದೂ ಕಾಲು ಲಕ್ಷ ರೂಗಳು ಮಂಜೂರಾಗಿದ್ದು, ಕ್ರೀಡಾಸಕ್ತರಿಗೆ ಸೂಕ್ತ ವಾತಾವರಣವೇ ಇಲ್ಲದೆ ಕ್ರೀಡಾಂಗಣ ಸೌಕರ್ಯಗಳ ಕೊರತೆಯಿಂದ ಕೂಡಿದೆ ಎಂದು ಕ್ರೀಡಾಸಕ್ತರು ದೂರಿದ್ದಾರೆ.
- Advertisement -
- Advertisement -
- Advertisement -