ಪಡಿತರ ಆಹಾರಧಾನ್ಯಗಳನ್ನು ಪಡೆದುಕೊಳ್ಳಬೇಕಾದರೆ ಆಧಾರ್ಕಾರ್ಡ್ ಖಡ್ಡಾಯವಿಲ್ಲ, ಎಫಿಕ್ ಕಾರ್ಡ್ ಖಡ್ಡಾಯವೆಂದು ಆಹಾರ ಮತ್ತು ನಾಗರೀಕರ ಸರಬರಾಜು ಇಲಾಖೆಯ ಆಯುಕ್ತ ಪುಟ್ಟಣ್ಣಶೆಟ್ಟಿ ಹೇಳಿದ್ದಾರೆ.
ನಗರದ ತಾಲ್ಲೂಕು ಪಂಚಾಯತಿ ಕಾರ್ಯಾಲಯದಲ್ಲಿ ಮಂಗಳವಾರ ಉಪಗ್ರಹಾಧಾರಿತ ಸಂವಾದ ಕಾರ್ಯಕ್ರಮದಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ, ಮತ್ತು ಗ್ರಾಮ ಪಂಚಾಯತಿಗಳ ಕಂಪ್ಯೂಟರ್ ಆಪರೇಟರ್ಗಳು ಮತ್ತು ನ್ಯಾಯಬೆಲೆ ಅಂಗಡಿಗಳ ಮಾಲೀಕರುಗಳಿಗೆ ಆಯೋಜನೆ ಮಾಡಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮೇ ತಿಂಗಳಿನಿಂದ ಬಿ.ಪಿ.ಎಲ್.ಕುಟುಂಬಗಳಿಗೆ ಒಂದು ಯೂನಿಟ್ಗೆ ೫ ಕೆ.ಜಿ.ಅಕ್ಕಿಯಂತೆ ಉಚಿತವಾಗಿ ನೀಡಲಾಗುತ್ತದೆ, ಸಕ್ಕರೆ ಹಾಗೂ ತಾಳೇ ಎಣ್ಣೆಯನ್ನು, ಶುದ್ದ ಉಪ್ಪನ್ನು ನೀಡಲಾಗುತ್ತದೆ. ಗ್ರಾಹಕರು ಎಣ್ಣೆ, ಉಪ್ಪು ಮತ್ತು ಸಕ್ಕರೆಗೆ ಹಣವನ್ನು ಪಾವತಿ ಮಾಡಬೇಕಾಗುತ್ತದೆ. ಎ.ಪಿ.ಎಲ್.ಕಾರ್ಡುದಾರರಿಗೂ ಕೂಡಾ ಅಕ್ಕಿಯನ್ನು ನೀಡಲಿದ್ದು, ಒಂದು ಯೂನಿಟ್ಗೆ ೫ ಕೆ.ಜಿ. ಅಕ್ಕಿ, ಪ್ರತಿ ಕೆ.ಜಿ.ಗೆ ೧೫ ರೂಪಾಯಿಗಳು. ಎರಡು ಯೂನಿಟ್ಗಿಂತ ಹೆಚ್ಚಾಗಿದ್ದರೆ ೧೦ ರೂಪಾಯಿಗಳ ದರದಲ್ಲಿ ಅಕ್ಕಿಯನ್ನು ವಿತರಣೆ ಮಾಡಲಾಗುತ್ತದೆ ಎಂದು ಅವರು ಹೇಳಿದರು.
ಇಲಾಖೆಯ ಅಧಿಕಾರಿಗಳು ಖಡ್ಡಾಯವಾಗಿ ಗ್ರಾಹಕರಿಂದ ಎಫಿಕ್ ಕಾರ್ಡುಗಳನ್ನು ಪಡೆದುಕೊಳ್ಳಬೇಕು, ಆಧಾರ್ಕಾರ್ಡ್ ಖಡ್ಡಾಯವಿಲ್ಲ. ಮುಂದಿನ ತಿಂಗಳಿನಿಂದ ಪಡಿತರ ಆಹಾರಧಾನ್ಯಗಳನ್ನು ಪಡೆಯಬೇಕಾದರೆ ಮತದಾರರ ಗುರುತಿನ ಚೀಟಿಯನ್ನು ನೀಡುವುದು ಖಡ್ಡಾಯವಾಗಿದ್ದು, ಆಧಾರ್ಕಾರ್ಡ್ ಕೊಡುವವರಿಂದ ಪಡೆದುಕೊಳ್ಳಿ ಎಂದರು.
ಗ್ರಾಮ ಪಂಚಾಯತಿಗಳಲ್ಲಿ ಆಧಾರ್ಕಾರ್ಡ್ ಇಲ್ಲದಿದ್ದರೂ ಕೂಡಾ ಖಡ್ಡಾಯವಾಗಿ ಎಫಿಕ್ ಕಾರ್ಡ್ನ್ನು ಎಸ್.ಎಂ.ಎಸ್. ಮಾಡಬೇಕು ಎಂದು ಗ್ರಾಮ ಪಂಚಾಯತಿಗಳ ಕಂಪ್ಯೂಟರ್ ಆಪರೇಟರ್ಗಳಿಗೆ ಸೂಚಿಸಿದರು.
ಸಂವಾದ ಕಾರ್ಯಕ್ರಮದಲ್ಲಿ ಜಿಲ್ಲಾ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಉನಿರ್ದೇಶಕ ಶ್ರೀನಿವಾಸಯ್ಯ, ತಾಲ್ಲೂಕಿನ ಶಿರಸ್ತೆದಾರ್ ಸಿ.ಪರಶಿವಮೂರ್ತಿ, ಆಹಾರ ನಿರೀಕ್ಷಕ ಮೂಗಣ್ಣ, ದ್ವೀತಿಯ ದರ್ಜೆ ಸಹಾಯಕ ಪ್ರಕಾಶ್ ಮುಂತಾದವರು ಹಾಜರಿದ್ದರು.
- Advertisement -
- Advertisement -
- Advertisement -
- Advertisement -