18.1 C
Sidlaghatta
Monday, February 16, 2026

ಪೇಜಾವರ ಶ್ರೀ ವಿಶ್ವೇಶ್ವತೀರ್ಥ ಶ್ರೀಪಾದರಿಗೆ ನುಡಿ ನಮನ

- Advertisement -
- Advertisement -

ಉಡುಪಿಯ ಪೇಜಾವರ ಮಠಾಧೀಶರಾದ ವಿಶ್ವೇಶ್ವತೀರ್ಥ ಶ್ರೀಪಾದರು ಇತ್ತೀಚಿಗೆ ಕೃಷ್ಣಕ್ಯರಾಗಿದ್ದಕ್ಕೆ ತಾಲ್ಲೂಕು ಬ್ರಾಹ್ಮಣ ಸಭಾ ವತಿಯಿಂದ ಗುರುವಾರ ಸಂಜೆ ನಗರದ ರಾಘವೇಂದ್ರ ಸ್ವಾಮಿ ಮಠದಲ್ಲಿ ನುಡಿ ನಮನವನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ರಾಘವೇಂದ್ರ ಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ಎಂ.ವಾಸುದೇವರಾವ್ ಮಾತನಾಡಿ, ಶ್ರೀಗಳು ಶಿಡ್ಲಘಟ್ಟದ ರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನದ ಶಂಕುಸ್ಥಾಪನೆ ಮಾಡಿ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿದರು ಹಾಗೂ ಹಿಂದೂ ಧರ್ಮದ ಸಾವಿರಾರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಧರ್ಮದ ಪ್ರಚಾರದಲ್ಲಿ ತೊಡಗಿ ಮಾರ್ಗದರ್ಶಕರಾಗಿದ್ದರು ಎಂದರು.
“ವಿಶ್ವೇಶ್ವತೀರ್ಥ ಶ್ರೀಪಾದರು ಸುಮಾರು 80 ವರ್ಷಗಳ ಕಾಲ ಸೇವೆ ಸಲ್ಲಿಸಿ, 5 ಪರ್ಯಾಯಗಳನ್ನು ವಿಜೃಂಭಣೆಯಿಂದ ಆಚರಿಸಿದರು. ದೇಶದ ರಾಜಕೀಯ ನೇತಾರರಿಗೆ, ವಿವಿದ ಕ್ಷೇತ್ರದ ಗಣ್ಯರಿಗೆ ಮಾರ್ಗ ದರ್ಶಕರಾಗಿದ್ದರು. ನಮ್ಮ ಹಿಂದೂ ಧರ್ಮಕ್ಕೆ ತೊಂದರೆಗಳು ಎದುರಾದ ಸಂದರ್ಭದಲ್ಲಿ ಅವರು ಮಾರ್ಗದರ್ಶನ ಮಾಡಿ ನಾಯಕತ್ವ ವಹಿಸುತ್ತಿದ್ದರು” ಎಂದು ವಿಪ್ರ ಪ್ರತಿಭಾ ಪುರಸ್ಕಾರ ಮತ್ತು ಸೇವಾ ಟ್ರಸ್ಟ್ ನ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ತಿಳಿಸಿದರು.
ತಾಲ್ಲೂಕು ಭ್ರಾಹ್ಮಣ ಮಹಾಸಭಾ ಅದ್ಯಕ್ಷ ಎ.ಎಸ್. ರವಿ ಮಾತನಾಡಿ ಶ್ರೀಗಳ ವೈಚಾರಿಕತೆ ಮತ್ತು ಧಾರ್ಮಿಕ, ಸಾಮಾಜಿಕ ಚಟುವಟಿಕೆಗಳನ್ನು ಸ್ಮರಿಸಿದರು,ಕೃಷ್ಣಕ್ಯರಾದ ಶ್ರೀಗಳಿಗೆ ಪುಷ್ಪ ನಮನ ಸಲ್ಲಿಸಲಾಯಿತು.
ಶಂರಸೇವಾ ಟ್ರಸ್ಟ್ ನ ಅಧ್ಯಕ್ಷ ಶ್ರೀನಿವಾಸಮೂರ್ತಿ, ಬಿ.ಆರ್.ನಟರಾಜ್, ವಿ.ಕೃಷ್ಣ, ಎ.ಎಸ್.ಶಂಕರರಾವ್, ಶಶಿಕಾಂತ್, ಮಂಜುನಾಥ್, ವೈಶಾಕ್, ನಾಗೇಂದ್ರ, ಉದಯ್, ನರಸಿಂಹಮೂರ್ತಿ, ಮಧುಸೂದನ್, ಪಿ.ಶ್ರೀಕಾಂತ್, ರಮೇಶ್ ಭಾಯಿರಿ, ವೆಂಕಟೇಶ, ಶಂಕರ್, ವೇಬ್ರಶ್ರೀ ಸತ್ಯನಾರಾಯಣ ಚಾರ್, ವೇಬ್ರಶ್ರೀ ಸುಬ್ರಹ್ಮಣ್ಯ ಶಾಸ್ತ್ರಿ, ಶಂಕರ್, ಕೆಂಪಣ್ಣ, ಹರೀಶ್ ಹಾಜರಿದ್ದರು.

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!