30.1 C
Sidlaghatta
Saturday, April 1, 2023

ಪೌಷ್ಟಿಕಾಂಶವುಳ್ಳ ಆಹಾರಗಳ ಸೇವನೆ ಅಗತ್ಯ

- Advertisement -
- Advertisement -

ಆರೋಗ್ಯವಂತ ಸಮಾಜದ ನಿರ್ಮಾಣವಾಗಬೇಕಾದರೆ ಉತ್ತಮ ಪೌಷ್ಟಿಕಾಂಶವುಳ್ಳ ಆಹಾರಗಳ ಸೇವನೆ ಅಗತ್ಯ ಎಂದು ಡಾ.ವಿಜಯ್ ಹೇಳಿದರು.
ನಗರದ ವಾಸವಿ ಶಾಲೆಯ ಆವರಣದಲ್ಲಿ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಆಯೋಡಿನ್ ಬಗ್ಗೆ ಚರ್ಚಾ ಸ್ಪರ್ಧೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಉತ್ತಮವಾದ ಪೌಷ್ಟಿಕಾಂಶಗಳಿಲ್ಲದ ಆಹಾರಗಳ ಸೇವನೆಯಿಂದಾಗಿ ಹುಟ್ಟುವಂತಹ ಮಕ್ಕಳ ದೈಹಿಕ ಬೆಳವಣಿಗೆಯಲ್ಲೂ ಬದಲಾವಣೆಗಳಾಗುವುದು. ಇದರಿಂದ ವಿದ್ಯಾರ್ಥಿಗಳ ಬುದ್ಧಿಶಕ್ತಿ ವೃದ್ಧಿಸಲು ತೊಡಕುಂಟಾಗಲಿದೆ. ಆದ್ದರಿಂದ ಮಕ್ಕಳು, ಹಾಗೂ ನಾಗರಿಕರು ಅಯೋಡೀನ್ ವುಳ್ಳ ಸಾಕಷ್ಟು ಆಹಾರಗಳನ್ನು ತಿನ್ನಬೇಕು. ಥೈರಾಡ್ ಹಾರ್ಮೋನ್ ಗಳ ರಚನೆಗಾಗಿ ಅಯೋಡಿನ್ ಬೇಕಾಗುತ್ತದೆ. ಅಯೋಡಿನ್ ಕೊರತೆಯಿಂದ ಗಾಯ್ಟರ್ (ಗಂಟಲುವಾಳು) ಬರುತ್ತದೆ (ಥೈರಾಡ್ ಗ್ರಂಥಿಯ ಊತ) ಸೇರಿದಂತೆ ಅನೇಕ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳಿರುತ್ತವೆ ಎಂದರು.
ವಾಸವಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಸತ್ಯನಾರಾಯಣಶೆಟ್ಟಿ ಮಾತನಾಡಿ, ನೀರು ಮತ್ತು ಆಹಾರದಲ್ಲಿನ ಅಯೋಡಿನ್ ಕೊರತೆ, ಖಾಯಿಲೆಗಳಿಗೆ ಮುಖ್ಯ ಕಾರಣ. ಸುರಕ್ಷಿತ ಮತ್ತು ಉತ್ತಮ ಗುಣಮಟ್ಟದ ಆಹಾರವೂ ಉತ್ತಮ ಆರೋಗ್ಯ ನಿರ್ವಹಣೆಗಾಗಿ ಅತ್ಯವಶ್ಯಕವಾಗುತ್ತದೆ ಎಂದರು.
ಶಾಲಾ ಮಕ್ಕಳಿಂದ ಅಯೋಡಿನ್ ಕುರಿತು ಚರ್ಚಾ ಸ್ಪರ್ಧೆ ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ವಿಜೇತರಾಗಿದ್ದ ಮಕ್ಕಳಿಗೆ ಪ್ರಶಸ್ತಿಪತ್ರ ವಿತರಿಸಲಾಯಿತು.
ಆರೋಗ್ಯ ಇಲಾಖೆ ಸಿಬ್ಬಂದಿಯಾದ ಕುಮಾರಸ್ವಾಮಿ, ನಂದಿನಿ, ಕವಿತ, ಮೀನಾ, ಶಾಲಾ ಸಿಬ್ಬಂದಿ ಈ ಸಂದರ್ಭದಲ್ಲಿ ಹಾಜರಿದ್ದರು.
 

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.
Captcha verification failed!
CAPTCHA user score failed. Please contact us!
error: Content is protected !!