ನಗರಸಭಾ ಅಂಗಡಿ ಮಳಿಗೆಗಳ ಬಾಡಿಗೆಯನ್ನು ಕಟ್ಟದ ಅಂಗಡಿಗಳಿಗೆ ಬೀಗಗಳನ್ನು ನಗರಸಭಾ ಅಧಿಕಾರಿಗಳು ಜಡಿದ ಘಟನೆ ಮಂಗಳವಾರ ನಡೆಯಿತು.
ಪಟ್ಟಣದ ನಗರಸಭೆಯ ಅಂಗಡಿಮಳಿಗೆಗಳನ್ನು ಹರಾಜು ಮುಖಾಂತರ ಬಾಡಿಗೆಗೆ ಪಡೆದುಕೊಂಡಿದ್ದ ವ್ಯಾಪಾರಿಗಳು ಕಳೆದ ಒಂದು ವರ್ಷದಿಂದ ಬಾಡಿಗೆಗಳನ್ನು ಪಾವತಿ ಮಾಡದೆ ಇದ್ದ ಕಾರಣದಿಂದಾಗಿ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಸ್ಥಳೀಯ ಪೊಲೀಸರ ಸಮ್ಮುಖದಲ್ಲಿ ಅಂಗಡಿಗಳನ್ನು ಬಾಡಿಗೆಗೆ ಪಡೆದಿದ್ದವರಿಂದ ಬಾಕಿ ಹಣವನ್ನು ವಸೂಲಿ ಮಾಡಿದರು, ಬಾಡಿಗೆಯನ್ನು ಕಟ್ಟದಿದ್ದ ಅಂಗಡಿಗಳಿಗೆ ಬೀಗ ಜಡಿದು, ಬಾಕಿ ಹಣವನ್ನು ಪಾವತಿ ಮಾಡಿದ ನಂತರ ಬಾಗಿಲು ತೆರೆಯಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದರು.
ಏಕಾಏಕಿ ಅಂಗಡಿಗಳಿಗೆ ಬೀಗ ಹಾಕುವಂತಹ ಪ್ರಯತ್ನ ಮಾಡಲಾಗುತ್ತಿದೆ, ಕೆಲವು ಅಂಗಡಿಗಳಿಗೆ ಬಾಡಿಗೆಗಳನ್ನೆ ನಿಗದಿಪಡಿಸಿಲ್ಲ, ಸ್ಟೇರ್ಕೇಸ್ಗಳ ಹೆಸರಿನಲ್ಲಿ ಅಂಗಡಿಗಳನ್ನು ಮಾಡಿಕೊಂಡಿದ್ದಾರೆ, ಕೆಲವು ಅಂಗಡಿಗಳನ್ನು ನಿರ್ಮಾಣ ಮಾಡುವಾಗ ಕಳಪೆ ಗುಣಮಟ್ಟದಿಂದ ಮಾಡಿದ್ದು, ಅಂಗಡಿಗಳು ಸೋರುತ್ತಿವೆ, ದುರಸ್ಥಿ ಮಾಡಿಕೊಡುವಂತೆ ಅನೇಕ ಬಾರಿಗೆ ಅರ್ಜಿಗಳನ್ನು ಸಲ್ಲಿಸಿದ್ದರೂ ಕೂಡಾ ಇದುವರೆಗೂ ಅಧಿಕಾರಿಗಳು ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ, ಸರಿಯಾದ ವಿದ್ಯುತ್ ದೀಪಗಳಿಲ್ಲ, ಬಾಡಿಗೆಗೆ ಹರಾಜು ನಡೆಯುವಾಗ ಎಲ್ಲಾ ಸೌಕರ್ಯಗಳನ್ನು ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದ್ದ ಅಧಿಕಾರಿಗಳು ಯಾವ ಕೆಲಸವನ್ನೂ ಮಾಡಿಕೊಟ್ಟಿಲ್ಲ, ಬಾಡಿಗೆಗೆ ಮಾತ್ರ ಪ್ರತಿತಿಂಗಳೂ ಬರುತ್ತಾರೆ ಎಂದು ಕೆಲವು ಅಂಗಡಿಗಳನ್ನು ಬಾಡಿಗೆಗೆ ಪಡೆದುಕೊಂಡಿರುವವರು ಅಧಿಕಾರಿಗಳ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
ವ್ಯಾಪಾರಸ್ಥರ ಆಕ್ಷೇಪಣೆಗೆ ಉತ್ತರಿಸಿದ ಕಂದಾಯ ಅಧಿಕಾರಿ, ಸವಿತಾ, ಈಗಾಗಲೇ ಅಂಗಡಿಗಳ ಬಾಡಿಗೆಗಳನ್ನು ಬಾಕಿ ಉಳಿಸಿಕೊಂಡಿರುವವರಿಗೆ ಮೂರು ಬಾರಿ ನೋಟಿಸ್ ಜಾರಿ ಮಾಡಲಾಗಿದೆ, ಕೊನೆಯ ನೋಟಿಸ್ ಜಾರಿಮಾಡಿದ ನಂತರವೇ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ವಸೂಲಿಗೆ ಬಂದಿದ್ದೇವೆ, ಬಾಡಿಗೆಗಳನ್ನು ಕಟ್ಟದಿದಲ್ಲಿ ಬೀಗಮುದ್ರೆ ಹಾಕಲು ಜಿಲ್ಲಾಧಿಕಾರಿಗಳು ಆದೇಶ ಮಾಡಿರುವುದರಿಂದ ನಾವು ವಸೂಲಿಗೆ ಮುಂದಾಗಿದ್ದೇವೆ, ೭೮ ಅಂಗಡಿಗಳ ಬಾಡಿಗೆಯ ಹಣ 28,17,277 ರೂಗಳಷ್ಟು ಬಾಕಿ ಇದೆ ಎಂದರು.
ನಗರಸಭೆಯ ಪರಿಸರ ಅಭಿಯಂತರ ದಿಲೀಪ್ಕಮಾರ್, ಬಾಲಚಂದ್ರ, ಪೊಲೀಸ್ ಸಬ್ ಇನ್ಸ್ಪೆಕ್ಟರ್ಗಳಾದ ಪುರುಷೋತ್ತಮ, ರಾಘವೇಂದ್ರ, ಚಿಂತಾಮಣಿ ಟೌನ್ ಪಿ.ಎಸ್.ಐ. ಸದಾನಂದ ಮುಂತಾದವರು ಹಾಜರಿದ್ದರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -