ಶಿಸ್ತನ್ನು ಅಳವಡಿಸಿಕೊಂಡರೆ ಒಳ್ಳೆಯ ಜೀವನ ನಡೆಸಲು ಸಾಧ್ಯ ಎಂದು ನಿವರತ್ತ ಯೋಧ ಟಿ.ಕೃಷ್ಣನ್ ತಿಳಿಸಿದರು.
ತಾಲ್ಲೂಕಿನ ದ್ಯಾವಪ್ಪನಗುಡಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ನಡೆದ 69ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಭಾರತೀಯ ಸೈನ್ಯದಲ್ಲಿ ಕರ್ತವ್ಯ ನಿರ್ವಹಿಸಿದ್ದು ನನ್ನ ಪುಣ್ಯ. ಇಂದು ಭಾರತೀಯ ಸೈನಿಕರು ವಿಶ್ವದಲ್ಲಿ ಅತ್ಯಂತ ಸಮರ್ಥರೆಂದು ಪ್ರಸಿದ್ಧಿ ಹೊಂದಿದ್ದಾರೆ. ನಿರಂತರ ಶ್ರಮ ನಮ್ಮನ್ನು ಕಾಪಾಡುತ್ತದೆ. ಸಧೃಡ ದೇಹ ಮತ್ತು ಮನಸ್ಸನ್ನು ಬೆಳೆಸಿಕೊಳ್ಳುವ ಮೂಲಕ ದೇಶದ ಪ್ರಗತಿಗೆ ಕಾರಣರಾಗಬೇಕು ಎಂದು ಹೇಳಿದರು.
ಶಾಲಾ ಮುಖ್ಯ ಶಿಕ್ಷಕ ಎಂ.ಪಿ.ಜೀವಂಧರ್ಕುಮಾರ್ ಮಾತನಾಡಿ, ಅಸಂಖ್ಯಾತ ಮಹನೀಯರ ತ್ಯಾಗ ಹೋರಾಟದ ಫಲದಿಂದ ನಮಗೆ ಸ್ವತಂತ್ರ್ಯ ಲಭಿಸಿದೆ. ದೇಶಕ್ಕಾಗಿ ದುಡಿದವರ ಜೀವನಚರಿತ್ರೆಗಳಿಂದ ಪ್ರೇರಣೆ ಹೊಂದಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ನಿವೃತ್ತ ಯೋಧರಾದ ಚಾಗೆ ಗ್ರಾಮದ ಟಿ.ಕೃಷ್ಣನ್, ಅಬ್ಲೂಡು ಗ್ರಾಮದ ಆಂಜಿನಪ್ಪ ಅವರನ್ನು ಸನ್ಮಾನಿಸಲಾಯಿತು. ಗುಡ್ಡಗಾಡು ಓಟ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಕ್ರೀಡಾಪಟು ದ್ಯಾವಪ್ಪನಗುಡಿ ನಾರಾಯಣಸ್ವಾಮಿ ಬಹುಮಾನ ವಿತರಿಸಿದರು. ಶಾಲೆಗೆ ವಾಲಿಬಾಲ್, ನೆಟ್ ಹಾಗೂ ಕ್ರೀಡಾ ಸಾಮಗ್ರಿಗಳನ್ನು ನೀಡಿದರು.
ಗ್ರಾಮದ ಹಿರಿಯರಾದ ಚಂದ್ರಶೇಖರ್, ಮಾಸ್ತಿ, ನಾರಾಯಣಸ್ವಾಮಿ, ದೇವರಾಜು ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -