ತಾಲ್ಲೂಕಿನ ಮಳ್ಳೂರು ಸಮೀಪದ ಸಾಯಿನಾಥ ಜ್ಞಾನ ಮಂದಿರದಲ್ಲಿ ಶುಕ್ರವಾರ ಗುರುಪೌರ್ಣಿಮೆಯ ಕಾರ್ಯಕ್ರಮಕ್ಕೆ ಸಾಯಿಬಾಬಾ ಪ್ರಸಾದ ಸಿದ್ದಪಡಿಸುತ್ತಿರುವ ಬೃಹತ್ ವಿಗ್ರಹವನ್ನು ತರಿಸಲಾಗಿದೆ.
ರಾಜ್ಯದಲ್ಲಿ ಪ್ರಥಮ ಬಾರಿಗೆ ಶಿರಡಿಯಿಂದ ಸುಮಾರು ೧೦ ಅಡಿ ಎತ್ತರದ ಸುಂದರವಾದ ಬಾಬಾ ಪ್ರಸಾದ ಸಿದ್ದಪಡಿಸುತ್ತಿರುವ ಬೃಹತ್ ವಿಗ್ರಹವನ್ನು ತರಿಸಲಾಗಿದ್ದು, ಶಿರಡಿಯಲ್ಲಿ ಪ್ರಸಾದಾಲಾಯ ಮುಂಬಾಗದಲ್ಲಿರುವ ವಿಗ್ರಹದ ಯಥಾವತ್ ಪ್ರತಿರೂಪವಾಗಿದೆ. ಸುಮಾರು ೧೦ ಲಕ್ಷ ರೂಗಳ ವೆಚ್ಚದಲ್ಲಿ ಶುಕ್ರವಾರ ಗುರುಪೌರ್ಣಿಮೆಯ ದಿನದಿಂದ ಸಾರ್ವಜನಿಕರ ದರ್ಶನಕ್ಕೆ ಇಡಲಾಗುತ್ತದೆ ಎಂದು ದೇವಾಲಯದ ಸಂಚಾಲಕ ಎಂ ನಾರಾಯಣಸ್ವಾಮಿ ತಿಳಿಸಿದ್ದಾರೆ.
- Advertisement -
- Advertisement -
- Advertisement -
- Advertisement -