ನಗರದ ಎಲ್.ಐ.ಸಿ ಪಾಲಸಿದಾರ ಎಚ್.ಎನ್.ಶ್ರೀನಿವಾಸ್(50) ಗುರುವಾರ ವಿದ್ಯುತ್ ಶಾಕ್ನಿಂದಾಗಿ ಮೃತಪಟ್ಟಿದ್ದಾರೆ. ನಗರದ ಕೆ.ಕೆ.ಪೇಟೆಯ ಕಾದಿರಪ್ಪ ರಸ್ತೆಯ ನಿವಾಸಿಯಾದ ಶ್ರೀನಿವಾಸ್ ಮೋಟರ್ ಪಂಪಿಗೆ ವಿದ್ಯುತ್ ಸಂಪರ್ಕ ನೀಡುವ ಸಂದರ್ಭದಲ್ಲಿ ವಿದ್ಯುತ್ ಶಾಕ್ನಿಂದಾಗಿ ಮೃತಪಟ್ಟಿದ್ದಾರೆ. ಮೃತರು ತಮ್ಮ ತಾಯಿಯೊಂದಿಗೆ ವಾಸಿಸುತ್ತಿದ್ದರು. ಹಲವಾರು ವೃದ್ಧರಿಗೆ ಉಚಿತವಾಗಿ ಔಷಧಿ ವಿತರಿಸುತ್ತಾ, ಕೆಲ ಬಡ ವಿದ್ಯಾರ್ಥಿಗಳಿಗೆ ಶಾಲಾ ಫೀಸನ್ನು ಕಟ್ಟುತ್ತಾ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಮೃತರ ಕಣ್ಣುಗಳನ್ನು ಮಿಂಟೋ ಕಣ್ಣಿನ ಆಸ್ಪತ್ರೆಗೆ ದಾನ ಮಾಡಲಾಗಿದ್ದು, ಇಬ್ಬರ ಅಂಧರ ಬಾಳಿಗೆ ಬೆಳಕಾಗಲಿದೆ ಎಂದು ಅವರ ಬಂಧುಗಳು ತಿಳಿಸಿದ್ದಾರೆ.
ಅಂತಿಮ ಸಂಸ್ಕಾರವನ್ನು ಗುರುವಾರ ಸಂಜೆ ಅವರ ತೋಟದಲ್ಲಿ ನಡೆಸುವುದಾಗಿ ಅವರ ಬಂಧುಗಳು ತಿಳಿಸಿದ್ದಾರೆ.
ನಗರಸಭೆಯ ಶವಸಾಗಣೆ ವಾಹನ ನಿಲ್ಲಿಸಿದ್ದ ಶೆಡ್ನ ಶಟರ್ ತೆರೆಯಲಾಗದ ಕಾರಣ ಖಾಸಗಿ ವಾಹನದಲ್ಲಿ ಶವವನ್ನು ತೆಗೆದುಕೊಂಡು ಹೋಗಬೇಕಾಯಿತು. ನಗರಸಭೆಯ ಸಿಬ್ಬಂದಿ ಹರಸಾಹಸ ಪಟ್ಟರೂ ಶಟರ್ ಅರ್ಧಂಬರ್ಧ ತೆರೆಯಲ್ಪಟ್ಟಿತಷ್ಟೆ. ಲಕ್ಷಾಂತರ ರೂಪಾಯಿಗಳ ವೆಚ್ಚದಲ್ಲಿ ತಂದ ಶವಸಾಗಾಣಿಕೆ ವಾಹನವಿದ್ದರೂ ಉಪಯೋಗಕ್ಕೆ ಬರದಂತಾಗಿದೆ. ಡೀಸಲ್ ಬಿಲ್ ಮಾತ್ರ ನಗರಸಭೆಯವರು ಖರ್ಚು ಹಾಕುತ್ತಿರುತ್ತಾರೆ ಎಂದು ಬೇಸರಗೊಂಡ ನಾಗರಿಕರು ಈ ಸಂದರ್ಭದಲ್ಲಿ ದೂರಿದರು.
- Advertisement -
- Advertisement -
- Advertisement -
- Advertisement -