ಸಾಲಕ್ಕೆ ಹೆದರಿ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲ್ಲೂಕಿನ ತಲಕಾಯಲಬೆಟ್ಟ ಗ್ರಾಮ ಪಂಚಾಯತಿಯ ಜಿ.ನಕ್ಕಲಹಳ್ಳಿ ಗ್ರಾಮದಲ್ಲಿ ನಡೆದಿದೆ.
ರೈತ ನರಸಿಂಹಪ್ಪ(45) ಮೃತಪಟ್ಟ ದುರ್ಧೈವಿಯಾಗಿದ್ದಾನೆ. ಮೂರೂವರೆಯಿಂದ ನಾಲ್ಕು ಲಕ್ಷ ರೂಗಳವರೆಗೂ ಸಾಲ ಮಾಡಿದ್ದ ರೈತ ನರಸಿಂಹಪ್ಪ ಸಾಲಕ್ಕೆ ಅಂಜಿ ಒಂದು ತಿಂಗಳಿನಿಂದ ಗ್ರಾಮವನ್ನು ಬಿಟ್ಟಿದ್ದ. ಕಳೆದ ಗುರುವಾರ ಈತ ಮನೆಗೆ ಬಂದಾಗ ಸಾಲದ ಬಗ್ಗೆ ಮನೆಯಲ್ಲಿ ಮಾತು ಬಂದು ಬೇಸರಗೊಂಡು ಜೋಳದ ತೋಟದಲ್ಲಿ ಕ್ರಿಮಿನಾಶಕವನ್ನು ಸೇವಿಸಿದ್ದಾನೆ. ಚಿಂತಾಮಣಿ ಸರ್ಕಾರಿ ಆಸ್ಪತ್ರೆ, ಎಸ್.ಎನ್.ಆರ್ ಆಸ್ಪತ್ರೆ ಹಾಗೂ ಕೋಲಾರದ ಮೆಡಿಕಲ್ ಕಾಲೇಜಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರೂ ಫಲಕಾರಿಯಾಗದೆ ಸೋಮವಾರ ಸಂಜೆ ಮೃತಪಟ್ಟಿದ್ದಾನೆ.
ನರಸಿಂಹಪ್ಪನಿಗೆ ತಾಯಿ, ಪತ್ನಿ ಹಾಗೂ ಎರಡು ಪುಟ್ಟ ಮಕ್ಕಳಿದ್ದು, ಮೃತರ ಕುಟುಂಬದವರ ರೋಧನ ಮುಗಿಲುಮುಟ್ಟಿತ್ತು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -