ವಿದ್ಯುತ್ ಸಮಸ್ಯೆಯನ್ನು ಪರಿಹರಿಸದ ಬೆಸ್ಕಾಂ ಇಲಾಖೆಯ ವಿರುದ್ಧ ಸೋಮವಾರ ಪ್ರತಿಭಟನೆ ನಡೆಸಿ ಬೆಸ್ಕಾ ಕಚೇರಿಗೆ ಮುತ್ತಿಗೆ ಹಾಕಲು ವಿವಿಧ ಸಂಘಟನೆಗಳ ಸದಸ್ಯರು ಸಭೆ ಸೇರಿ ತೀರ್ಮಾನಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸಭೆ ಸೇರಿದ ವಿವಿಧ ಸಂಘಟನೆಯ ಸದಸ್ಯರು, ರೈತರಿಗೆ, ರೀಲರುಗಳಿಗೆ, ವ್ಯಾಪಾರಸ್ಥರಿಗೆ, ಓದುವ ಮಕ್ಕಳಿಗೆ ಎಲ್ಲರಿಗೂ ಸಮಸ್ಯೆಯಾಗಿ ಆರ್ಥಿಕತೆಯು ಕುಂಠಿತಗೊಳ್ಳಲು ಕಾರಣವಾದ ವಿದ್ಯುತ್ ಸಮಸ್ಯೆ ಸರಿಹೋಗಬೇಕು. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕತ್ತಲಲ್ಲಿ ಕಣ್ಣು ಮುಚ್ಚಿ ಕುಳಿತಂತಿದ್ದಾರೆ. ಎಲ್ಲಾ ಸಂಘಟನೆಗಳ ಸದಸ್ಯರೂ ಒಗ್ಗೂಡಿ ಪ್ರತಿಭಟಿಸೋಣ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಮಾನ ಮನಸ್ಕರ ಹೋರಾಟ ಸಮಿತಿ ತಾಲ್ಲೂಕು ಅಧ್ಯಕ್ಷ ಜೆ.ಎಸ್.ವೆಂಕಟಸ್ವಾಮಿ, ಕಾರ್ಯದರ್ಶಿ ಪ್ರತೀಶ್, ಉಪಾಧ್ಯಕ್ಷ ಅಕ್ರಂಪಾಷ, ಕನ್ನಡಸೇನೆಯ ಬಿ.ಮಂಜುನಾಥ್, ಯೂನಿಟಿ ಸಿಲ್ಸಿಲಾ ಅಧಯಕ್ಷ ಮೊಹಮ್ಮದ್ ಅಸಾದ್, ಕರ್ನಾಟಕ ಟಿಪ್ಪು ಸುಲ್ತಾನ್ ಸಂಘದ ಅಫ್ಜತ್ ಪಾಷ, ಅಲ್ಪಸಂಖ್ಯಾತರ ಸಂಘದ ಬಿ.ಎಸ್.ಸಾದಿಕ್ ಪಾಷ, ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಎಸ್.ಎಂ.ರವಿಪ್ರಕಾಶ್, ಜಿಲ್ಲಾ ಉಪಾಧ್ಯಕ್ಷ ಹುಸೇನ್ಸಾಬ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -