ಅಂಗವೈಕಲ್ಯವುಳ್ಳವರು ಆದಷ್ಟೂ ಪರಾವಲಂಬಿಗಳಾಗದಂತೆ ವೀಲ್ ಚೇರ್ ನೀಡುತ್ತಿರುವುದಾಗಿ ಎಸ್.ಎನ್. ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ ತಿಳಿಸಿದರು.
ತಾಲ್ಲೂಕಿನ ಸಾದಲಿ ಪಂಚಾಯತಿಯ ವಿವಿಧ ಗ್ರಾಮಗಳ ಅಂಗವಿಕಲರಿಗೆ ಗುರುವಾರ ವೀಲ್ ಚೇರ್ ವಿತರಿಸಿ ಅವರು ಮಾತನಾಡಿದರು.
ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಅಂಗವೈಕಲ್ಯತೆಯುಳ್ಳವರು ಇದ್ದಾರೆ. ಅವರಿಗೆ ವೀಲ್ ಚೇರ್ ನೀಡುವುದರಿಂದ ಅವರ ಕುಟುಂಬದವರಿಗೂ ಸಹಕಾರಿಯಾಗುತ್ತದೆ. ಕಾಮನಹಳ್ಳಿ ಚೌಡಪ್ಪ, ಸಾದಲಿಯ ಸತ್ಯಪ್ಪ ಮತ್ತು ನರಸಿಂಹಪ್ಪ ಅವರಿಗೆ ವೀಲ್ಚೇರ್ ನೀಡಿದ್ದು, ಮುಂದಿನ ದಿನಗಳಲ್ಲಿ ಅಗತ್ಯತೆಯಿರುವವರಿಗೆ ವಿತರಿಸಲಾಗುವುದು ಎಂದು ಹೇಳಿದರು.
- Advertisement -
- Advertisement -
- Advertisement -
- Advertisement -