ಶವಸಾಗಾಣಿಕೆಯ ವಾಹನವನ್ನು ಪುರಸಭೆಯ ಆವರಣದಲ್ಲಿ ಪುರಸಭಾ ಅಧ್ಯಕ್ಷೆ ಮತ್ತು ಸದಸ್ಯರು ಪೂಜೆ ಸಲ್ಲಿಸುವ ಮೂಲಕ ಸಾರ್ವಜನಿಕರ ಸೇವೆಗೆ ಶನಿವಾರ ಅರ್ಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪುರಸಭಾ ಅಧ್ಯಕ್ಷೆ ಮುಷ್ಠರಿ ತನ್ವೀರ್, ‘ಪಟ್ಟಣದ ಎಲ್ಲಾ ವರ್ಗದ ಜನತೆಗೆ ಉಪಯೋಗವಾಗಲಿ ಎಂಬ ಉದ್ದೇಶದಿಂದ ಮಾಜಿ ಶಾಸಕ ವಿ.ಮುನಿಯಪ್ಪ ಅವರು ಅಧಿಕಾರದಲ್ಲಿದ್ದಾಗ ಸುಮಾರು ೧೦ ಲಕ್ಷ ರೂಪಾಯಿ ಹಣವನ್ನು ಶವಸಾಗಾಣಿಕೆ ವಾಹನದ ಖರೀದಿಗಾಗಿ ನೀಡಿದ್ದು ತಾಂತ್ರಿಕ ದೋಷಗಳಿಂದ ವಾಹನದ ಕಾರ್ಯಾರಂಭ ವಿಳಂಬವಾಗಿತ್ತು. ಹಿಂದೂ ರುದ್ರಭೂಮಿ ಅಭಿವೃದ್ಧಿ ಸಮಿತಿಯ ಬಿ.ಆರ್.ಅನಂತಕೃಷ್ಣ, ಮಾಜಿ ಪುರಸಭಾ ಸದಸ್ಯ ಎನ್.ಲಕ್ಷ್ಮೀನಾರಾಯಣ್ ಮತ್ತು ಸರಸ್ವತಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಶ್ರೀಕಾಂತ್ ಮೂರು ವರ್ಷಗಳ ಕಾಲ ಸತತ ಪರಿಶ್ರಮದಿಂದ ಈ ವಾಹನ ಜನರ ಸೇವೆಗೆ ಲಭ್ಯವಾಗಿದೆ’ ಎಂದು ಹೇಳಿದರು.
ಜಿಲ್ಲಾಧಿಕಾರಿಯವರ ಆದೇಶದಂತೆ ಪಟ್ಟಣ ಪುರಸಭೆ ವ್ಯಾಪ್ತಿಯಲ್ಲಿ ವಾಹನವು ಕಾರ್ಯನಿರ್ವಹಿಸುವುದು. ಪಟ್ಟಣದ ಜನತೆಗೆ ರುದ್ರಭೂಮಿಗಳು ದೂರವಿರುವುದರಿಂದ ಯಾರಾದರೂ ಮೃತಪಟ್ಟರೆ ಮೃತದೇಹವನ್ನು ಸಾಗಿಸಲು ವಾಹನವನ್ನು ಉಪಯೋಗಿಸಿಕೊಳ್ಳಬಹುದು. ವಾಹನದ ಸಂಪೂರ್ಣ ನಿರ್ವಹಣೆಯನ್ನು ಪುರಸಭೆಯಿಂದಲೇ ಮಾಡಲಾಗುತ್ತದೆ. ವಾಹನದ ಶುಲ್ಕ ನಿಗಧಿಯ ಬಗ್ಗೆ ಪುರಸಭೆ ಸರ್ವ ಸದಸ್ಯರ ಸಮ್ಮುಖದಲ್ಲಿ ತಿರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಪುರಸಭಾ ಮುಖ್ಯಾಧಿಕಾರಿ ರಾಮ್ಪ್ರಕಾಶ್, ಉಪಾಧ್ಯಕ್ಷೆ ಸುಮಿತ್ರಮ್ಮ ರಮೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೇಶವಮೂರ್ತಿ, ಸದಸ್ಯರಾದ ಜೆ.ಎಂ.ಬಾಲಕೃಷ್ಣ, ಸುಹೇಲ್ಅಹ್ಮದ್, ಎಚ್.ಎಸ್.ನಯಾಜ್, ಜಬೀವುಲ್ಲಾ, ವಿಪ್ರಪ್ರತಿಭಾ ಪುರಸ್ಕಾರ ಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಮಾಜಿ ಪುರಸಭಾ ಸದಸ್ಯ ಎನ್.ಲಕ್ಷ್ಮೀನಾರಾಯಣ್ ಮತ್ತು ಸರಸ್ವತಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಶ್ರೀಕಾಂತ್, ಮುಸ್ತು, ಎಲ್.ಮಂಜುನಾಥ್, ಸುರೇಶ್, ಸಾಧಿಕ್ ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -
- Advertisement -