29.1 C
Sidlaghatta
Saturday, March 25, 2023

ಶಿಡ್ಲಘಟ್ಟದಲ್ಲಿ ಕ್ರಿಶ್ಚಿಯನ್‌ರ ಮತಪ್ರಚಾರ: ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರ ಅಡ್ಡಿ

- Advertisement -
- Advertisement -

ನಗರದ ವಿವಿದೆಡೆ ಕ್ರಿಶ್ಚಿಯನ್ ಧರ್ಮಕ್ಕೆ ಸಂಬಂಧಿಸಿದ ಕರ ಪತ್ರಗಳನ್ನು ಹಂಚುತ್ತಾ ಮತ ಪ್ರಚಾರ ನಡೆಸುತ್ತಿದ್ದ ಇಬ್ಬರು ಮಹಿಳೆಯರನ್ನು ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಬುಧವಾರ ನಡೆದಿದೆ.
ನಗರದ ಮಯೂರ ವೃತ್ತ, ಕೋಟೆ ವೃತ್ತ, ಜೌಗುಪೇಟೆ, ಉಲ್ಲೂರು ಪೇಟೆ ಮುಂತಾದ ಕಡೆ ಕ್ರಿಶ್ಚಿಯನ್ ಧರ್ಮಕ್ಕೆ ಸಂಬಂಧಿಸಿದ ಕರ ಪತ್ರಗಳನ್ನು ಹಿಡಿದು ಮತಪ್ರಚಾರ ನಡೆಸುತ್ತಿದ್ದ ಇಬ್ಬರು ಮಹಿಳೆಯರನ್ನು ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಮನೆಯಲ್ಲಿ ಯಾರೊಬ್ಬರೂ ಗಂಡಸರು ಇಲ್ಲದ ಸಮಯದಲ್ಲಿ ಮಹಿಳೆಯರು ಮಾತ್ರವೇ ಇರುವಾಗ ಮನೆಯೊಳಗೆ ಪ್ರವೇಶಿಸಿ ಕ್ರಿಶ್ಚಿಯನ್ ಧರ್ಮಕ್ಕೆ ಸಂಬಂಧಿಸಿದ ಕರಪತ್ರಗಳನ್ನು ನೀಡಿ ಬೈಬಲ್‌ನ್ನು ಕಲಿಯುವಂತೆ, ಯೇಸುವನ್ನು ಪ್ರಾರ್ಥಿಸುವಂತೆ ಪ್ರೇರೇಪಿಸುತ್ತಿದ್ದರು ಎಂದು ಆರೋಪಿಸಲಾಗಿದೆ.
ಮತ ಪ್ರಚಾರ ಮಾಡುತ್ತಿದ್ದ ಮಹಿಳೆಯರ ಬಳಿ ಬೈಬಲ್‌ನ್ನು ಓದಿ, ಏಕೆ ಎಲ್ಲಿ ಓದಬೇಕು ಎಂಬ ವಿಷಯಗಳನ್ನು ಮುದ್ರಿಸಿರುವ ಕರಪತ್ರಗಳನ್ನು ವಶಪಡಿಸಿಕೊಂಡ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಅವರಿಬ್ಬರನ್ನು ನಗರದ ಪೊಲೀಸರಿಗೆ ಒಪ್ಪಿಸಿದರು.
ಮಹಿಳೆಯರಿಬ್ಬರಿಂದ ಮತ್ತೊಮ್ಮೆ ಈ ರೀತಿಯಾಗಿ ಮತ ಪ್ರಚಾರ ಮಾಡದಂತೆ ಮುಚ್ಚಳಿಕೆ ಬರೆಸಿಕೊಂಡು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.
ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾಧ್ಯಕ್ಷ ಮಂಜುನಾಥ್, ಜೆಇ ಶ್ರೀನಿವಾಸ್, ಚಂದ್ರಪ್ಪ, ಮಹೇಶ್, ವೇಣು, ಅಶ್ವತ್ಥ್ ಮತ್ತಿತರರು ಹಾಜರಿದ್ದರು.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.
Captcha verification failed!
CAPTCHA user score failed. Please contact us!
error: Content is protected !!