ಸಾರ್ವಜನಿಕ ಸ್ಮಶಾನದಲ್ಲಿರುವ ಆಲದಮರದಲ್ಲಿನ ಹೆಜ್ಜೇನು ಹುಳುಗಳ ಗೂಡುಗಳನ್ನು ನಾಶಪಡಿಸುವಂತೆ ಮುತ್ತೂರು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ತಾಲ್ಲೂಕಿನ ಮಳ್ಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮುತ್ತೂರು ಗ್ರಾಮದಿಂದ ಮೇಲೂರು ಕಡೆಗೆ ಸಂಚಾರ ಮಾಡುವ ಮುಖ್ಯರಸ್ತೆಯ ಪಕ್ಕದಲ್ಲೆ ಇರುವ ಸ್ಮಶಾನದ ಜಾಗದಲ್ಲಿರುವ ಬೃಹತ್ ಗಾತ್ರದ ಆಲದಮರದಲ್ಲಿ ಅನೇಕ ಹೆಜ್ಜೇನುಗೂಡುಗಳು ಕಟ್ಟಿಕೊಂಡಿವೆ. ಯಾರಾದರೂ ಮೃತಪಟ್ಟಾಗ ಶವಸಂಸ್ಕಾರಕ್ಕಾಗಿ ಹೋದಾಗಲೆಲ್ಲಾ ಹೆಜ್ಜೇನುಗಳು ದಾಳಿಮಾಡಿ ಕಚ್ಚುತ್ತಿರುವುದರಿಂದ ಅನೇಕ ಮಂದಿ ಆಸ್ಪತ್ರೆ ಪಾಲಾಗುವ ಪರಿಸ್ಥಿತಿಗಳು ನಿರ್ಮಾಣವಾಗುತ್ತಿದೆ, ಈ ಮುಂಚೆಯೂ ಕೂಡಾ ಶವಸಂಸ್ಕಾರಕ್ಕೆ ಹೋದಾಗ ೧೫ ಮಂದಿಗೆ ಕಚ್ಚಿದ್ದರಿಂದ ಗಾಯಗೊಂಡು ಆಸ್ಪತ್ರೆಗಳಿಗೆ ಸೇರುವಂತಾಗಿತ್ತು, ಶುಕ್ರವಾರವೂ ಕೂಡಾ ಶವಸಂಸ್ಕಾರಕ್ಕೆಂದು ಹೋಗಿದ್ದಾಗ ಹುಳುಗಳು ದಾಳಿ ನಡೆಸಿವೆ.
ಮಳ್ಳೂರು ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ಅನೇಕ ಬಾರಿಗೆ ಮನವಿಗಳನ್ನು ಕೊಟ್ಟಿದ್ದರೂ ಕೂಡಾ ಇದುವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ, ಮರದಲ್ಲಿರುವ ಹೆಜ್ಜೇನು ಗೂಡುಗಳನ್ನು ನಾಶಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರಾದ ಮಂಜುನಾಥ್, ಗಂಗರೆಡ್ಡಿ, ನಾಗಪ್ಪ, ಸುಧಾಕರ್, ಗಂಗಾಧರ, ಮುನಿಯಪ್ಪ, ಮುನಿವೆಂಕಟಪ್ಪ, ಸರಸ್ವತಮ್ಮ, ವೆಂಕಟಮ್ಮ, ನಾರಾಯಣಸ್ವಾಮಿ, ಮುಂತಾದವರು ಒತ್ತಾಯಿಸಿದ್ದಾರೆ.
- Advertisement -
- Advertisement -
- Advertisement -
- Advertisement -