ಅಂಗವಿಕಲರಿಗೆ ಟ್ರೈಸಿಕಲ್ ವಿತರಣೆ

- Advertisement -
- Advertisement -

ಅಂಗವಿಕಲರಿಗೆ ಅನುಕಂಪ ಬೇಕಿಲ್ಲ. ಅವರಿಗೆ ಸಿಗಬೇಕಾದ ಸವಲತ್ತು ಹಾಗೂ ಪ್ರಾಮುಖ್ಯತೆಯನ್ನು ನೀಡಿ ಎಂದು ಅಧಿಕಾರಿಗಳಿಗೆ ಶಾಸಕ ಎಂ.ರಾಜಣ್ಣ ಸೂಚಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯತಿ ಆವರಣದಲ್ಲಿ ೨೦೧೨–-೧೩ ಹಾಗು ೨೦೧೩-–೧೪ ನೇ ಸಾಲಿನ ನಿರ್ಭಂದಿತ ಹಾಗೂ ೧೩ ನೇ ಹಣಕಾಸಿನ ಯೋಜನೆಯ ಶೇಕಡಾ ೩ ರ ಅನುಧಾನದಡಿ ಅಂಗವಿಕಲರಿಗೆ ಬುಧವಾರ ಟ್ರೈಸಿಕಲ್ ವಿತರಣೆ ಮಾಡಿ ಅವರು ಮಾತನಾಡಿದರು.
ಅಂಗವಿಕಲರು ಯಾವುದೇ ಸರ್ಕಾರಿ ಕಚೇರಿಗೆ ಬಂದರೂ ಅವರಿಗೆ ಪ್ರಥಮ ಆದ್ಯತೆ ನೀಡುವುದರೊಂದಿಗೆ ಅವರಿಗೆ ಸಿಗಬೇಕಾದ ಸವಲತ್ತುಗಳನ್ನು ತ್ವರಿತಗತಿಯಲ್ಲಿ ಮಾಡಿಕೊಡಬೇಕು. ಹಣದ ರೂಪದಲ್ಲಿ ಅನುದಾನವನ್ನು ಇತರ ತಾಲ್ಲೂಕುಗಳಲ್ಲಿ ನೀಡಡಬಹುದಾದರೂ ನಮ್ಮ ತಾಲ್ಲೂಕಿನಲ್ಲಿ ನೀಡುವಂತಿಲ್ಲ. 9 ಲಕ್ಷ 45 ಸಾವಿರ ರೂಪಾಯಿಯಷ್ಟು ಹಣವಿದೆ. ಸಲಕರಣೆ ರೂಪದಲ್ಲಿಯೇ ಅನುದಾನ ವಿತರಿಸಬೇಕಾದ ಅನಿವಾರ್ಯತೆಯಿದೆ ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿಯ ಶೇಕಡಾ ೩ ರಷ್ಟು ಅನುದಾನದಲ್ಲಿ ತಾಲ್ಲೂಕಿನ ಒಟ್ಟು ೩೮ ಮಂದಿ ಅಂಗವಿಕಲರಿಗೆ 2 ಲಕ್ಷ 45 ಸಾವಿರ ರೂಪಾಯಿಗಳ ಬೆಲೆಯ ಟ್ರೈಸಿಕಲ್‌ಗಳನ್ನು ವಿತರಿಸಲಾಯಿತು.
ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಡಾ.ಸಿದ್ದರಾಮಯ್ಯ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಆಂಜಿನಮ್ಮ, ಉಪಾಧ್ಯಕ್ಷ ಡಿ.ಎಸ್.ಎನ್.ರಾಜು, ಮಾಜಿ ಅಧ್ಯಕ್ಷರಾದ ಯರ್ರಬಚ್ಚಪ್ಪ, ಬಿ.ಎನ್.ವೇಣುಗೋಪಾಲ್, ತಾಲ್ಲೂಕು ಪಂಚಾಯತಿ ಸದಸ್ಯರಾದ ಶ್ರೀನಾಥ್, ತಹಸೀಲ್ದಾರ್ ಜಿ.ಎ.ನಾರಾಯಣಸ್ವಾಮಿ. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಗಣಪತಿಸಾಕರೆ, ಮಂಜುನಾಥ್‌, ಮುನಿರೆಡ್ಡಿ, ಮುನಿರಾಜು, ಮುನಿವೆಂಕಟಸ್ವಾಮಿ, ದ್ಯಾವಪ್ಪ, ಮಾರಪ್ಪ, ಸಂತೋಷ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

Sidlaghatta News Desk
Sidlaghatta News Deskhttp://www.sidlaghatta.com
The editorial desk of Sidlaghatta.com (Namma Shidlaghatta), covering civic affairs, agriculture, silk trade, and local government news for Sidlaghatta taluk, Karnataka.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!