ಬ್ಯಾಂಕಿಗೆ ಬರುವಂತಹ ಗ್ರಾಹಕರೊಂದಿಗೆ ಉತ್ತಮವಾದ ಭಾಂದವ್ಯವನ್ನು ಇಟ್ಟುಕೊಂಡು ಉತ್ತಮ ಸೇವೆಯನ್ನು ಒದಗಿಸುವಂತೆ ಕೆನರಾ ಬ್ಯಾಂಕಿನ ಸಿಬ್ಬಂದಿಗೆ ಚಿಕ್ಕಬಳ್ಳಾಪುರ ಮಾರ್ಗದರ್ಶಿ ಬ್ಯಾಂಕಿನ ವ್ಯವಸ್ಥಾಪಕಿ ಸ್ವರ್ಣಲತಾ ತಿಳಿಸಿದರು.
ನಗರದ ಟಿ.ಬಿ. ರಸ್ತೆಯ ಹಳೇ ಪೊಲೀಸ್ ಠಾಣೆಯ ಸಮೀಪದಲ್ಲಿದ್ದ ತಾಲ್ಲೂಕಿನ ಕೆನರಾ ಬ್ಯಾಂಕನ್ನು ನಗರಸಭೆ ಕಾರ್ಯಾಲಯದ ಪಕ್ಕದಲ್ಲಿರುವ ನೂತನ ಕಟ್ಟಡಕ್ಕೆ ವರ್ಗಾವಣೆ ಮಾಡಿದ್ದು, ನೂತನ ಬ್ಯಾಂಕ್ ಶಾಖೆಯನ್ನು ಸೋಮವಾರ ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಕೆನರಾ ಬ್ಯಾಂಕಿನ ವತಿಯಿಂದ ಗ್ರಾಹಕರ ಅನುಕೂಲಕ್ಕಾಗಿ ಅನೇಕ ಸೌಲಭ್ಯಗಳನ್ನು ನೀಡುತ್ತಿದ್ದು, ಗ್ರಾಹಕರು ಎಲ್ಲಾ ಸೌಲಭ್ಯಗಳನ್ನು ಪಡೆದುಕೊಂಡು ಆರ್ಥಿಕವಾಗಿ ಸಬಲರಾಗುವುದರ ಜೊತೆಗೆ ಬ್ಯಾಂಕುಗಳಿಂದ ಪಡೆಯುವಂತಹ ಸಾಲಗಳನ್ನು ನಿಗದಿತ ಸಮಯದಲ್ಲಿ ಮರುಪಾವತಿ ಮಾಡಿ, ಬ್ಯಾಂಕುಗಳನ್ನು ಮತ್ತಷ್ಟು ಅಭಿವೃದ್ಧಿಗೊಳಿಸಬೇಕು, ಗ್ರಾಹಕರಿಗೆ ಉತ್ತಮ ಸೇವೆ ಸಲ್ಲಿಸುವುದೇ ಬ್ಯಾಂಕಿನ ಅಧಿಕಾರಿಗಳ ಗುರಿಯಾಗಲಿ ಎಂದರು.
ಬ್ಯಾಂಕಿನ ವ್ಯವಸ್ಥಾಪಕ ಗಿರೀಶ್ ಮಾತನಾಡಿ, ನಮ್ಮ ಬ್ಯಾಂಕಿಗೆ ಬರುವಂತಹ ಎಲ್ಲಾ ಗ್ರಾಹಕರಿಗೆ ಅನುಕೂಲವಾಗುವಂತೆ ಬ್ಯಾಂಕಿನಲ್ಲಿ ಲಾಕರ್ಗಳ ವ್ಯವಸ್ಥೆ, ತ್ವರಿತಗತಿಯಲ್ಲಿ ಸೇವೆ ಒದಗಿಸಲು ಎರಡು ಕೌಂಟರ್ಗಳ ವ್ಯವಸ್ಥೆ ಕಲ್ಪಿಸಲಾಗಿದೆ. ೨೫ ಸಾವಿರ ರೂಪಾಯಿಗಳಿಗಿಂತಲೂ ಹೆಚ್ಚಿನ ಹಣವನ್ನು ತುಂಬುವಂತಹ ಗ್ರಾಹಕರಿಗೆ ಪ್ರತ್ಯೇಕ ಕೌಂಟರ್ ವ್ಯವಸ್ಥೆ ಇದೆ. ೨೫ ಸಾವಿರ ರೂಪಾಯಿಗಳಿಗಿಂತ ಕಡಿಮೆ ಹಣವನ್ನು ತುಂಬುವಂತಹ ಗ್ರಾಹಕರಿಗೆ ಪ್ರತ್ಯೇಕವಾದ ಕೌಂಟರ್ ಮಾಡಲಾಗಿದೆ, ವಿನೂತನವಾದ ಟೋಕನ್ ಸಿಸ್ಟಮ್ ಇದೆ. ನಗರದಲ್ಲಿ ೪ ಎ.ಟಿ.ಎಂ.ಗಳ ವ್ಯವಸ್ಥೆ ಇದೆ, ಬ್ಯಾಂಕಿನಲ್ಲಿ ಕೀಯೋಸ್ಕ್ ವ್ಯವಸ್ಥೆಯಿರುವುದರಿಂದ ಗ್ರಾಹಕರು ಹಣವನ್ನು ನೇರವಾಗಿ ಯಾವುದೇ ಚಲನ್ ಭರ್ತಿ ಮಾಡದೆ ಕಳುಹಿಸಬಹುದಾಗಿದೆ, ಭದ್ರವಾದ ಲಾಕರ್ಗಳ ವ್ಯವಸ್ಥೆಯೂ ಇದೆ, ಅಂಗವಿಕಲರು ಹಾಗೂ ವೃದ್ಧರು ಯಾವುದೇ ಸಮಸ್ಯೆಯಿಲ್ಲದೆ ಬ್ಯಾಂಕಿನಲ್ಲಿ ವ್ಯವಹರಿಸಬಹುದು ಎಂದು ತಿಳಿಸಿದರು.
ಮೇಲೂರು ಕೆನರಾ ಬ್ಯಾಂಕಿನ ವ್ಯವಸ್ಥಾಪಕಿ ಇಂದುಶ್ರೀ ಪಾಟೀಲ್, ವೈದ್ಯ ಡಾ.ಸತ್ಯನಾರಾಯಣರಾವ್, ಮುನಿಲಕ್ಷ್ಮಮ್ಮ, ಶಿವರುದ್ರಾಚಾರಿ, ರೈತಕೂಟಗಳ ಒಕ್ಕೂಟದ ಅಧ್ಯಕ್ಷ ಹಿತ್ತಲಹಳ್ಳಿ ಗೋಪಾಲಗೌಡ, ಅಶ್ವಕ್ಅಹ್ಮದ್ ಹಾಗೂ ಬ್ಯಾಂಕಿನ ಸಿಬ್ಬಂದಿ ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -