25.1 C
Sidlaghatta
Friday, April 26, 2024

ನಗರಸಭೆಯಾಗಿ ಮೇಲ್ದರ್ಜೆಗೇರಿರುವ ಶಿಡ್ಲಘಟ್ಟ

- Advertisement -
- Advertisement -

ನಗರಸಭೆಯಾಗಿ ಮೇಲ್ದರ್ಜೆಗೇರಿರುವ ಶಿಡ್ಲಘಟ್ಟದಲ್ಲಿ ಇನ್ನು ಮುಂದೆ ನಾಗರಿಕರಿಗೆ ಸರ್ಕಾರದಿಂದ ಹೆಚ್ಚಿನ ಸೌಲಭ್ಯಗಳು ಸಿಗಲಿವೆ ಎಂದು ನಗರಸಭೆಯ ಅಧ್ಯಕ್ಷೆ ಮುಷ್ಠರಿತನ್ವೀರ್ ತಿಳಿಸಿದರು.
ನಗರಸಭೆಯ ಆವರಣದಲ್ಲಿ ನಾಮಫಲಕವನ್ನು ಅನಾವರಣಗೊಳಿಸಿದ ಅವರು, ಇನ್ನು ಮುಂದೆ ಸರ್ಕಾರದಿಂದ ಹೆಚ್ಚಿನ ಅನುದಾನ ಸಿಗಲಿದೆ. ಹಾಗಾಗಿ ಹೆಚ್ಚಿನ ಹಾಗೂ ಉತ್ತಮ ಸವಲತ್ತುಗಳನ್ನು ಒದಗಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಜನಸಂಖ್ಯೆಯ ಆಧಾರದ ಮೇಲೆ ಪುರಸಭೆಯಾಗಿದ್ದ ಇದು ಇದೀಗ ನಗರಸಭೆಯಾಗಿ ಮೇಲ್ದರ್ಜೆಗೇರಿದ್ದು, ಇನ್ನು ಮುಂದೆ ವಿಶೇಷ ಹಾಗೂ ಹೆಚ್ಚಿನ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತದೆ. ಯಾವುದೆ ಒಂದು ಸ್ಥಳೀಯ ಸಂಸ್ಥೆಗೆ ಕಂದಾಯ, ಸೇವಾ ಶುಲ್ಕದ ಆದಾಯವೂ ಮುಖ್ಯ. ಅದರ ಆಧಾರದ ಮೇಲೆಯೆ ಕೆಲ ಯೋಜನೆಗಳ ಅನುದಾನ ಬಿಡುಗಡೆಯಾಗಲಿದೆ. ಹಾಗಾಗಿ ಕಂದಾಯವನ್ನು ಸಕಾಲಕ್ಕೆ ಪಾವತಿಸಿ ಆರ್ಥಿಕವಾಗಿ ಸದೃಢಗೊಳಿಸಲು ಮನವಿ ಮಾಡಿದರು.
ನಗರಸಭೆ ಉಪಾಧ್ಯಕ್ಷೆ ಸುಮಿತ್ರಾರಮೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೇಶವಮೂರ್ತಿ, ಸದಸ್ಯರಾದ ಚಿಕ್ಕಮುನಿಯಪ್ಪ, ಬಾಬು, ಇಲಿಯಾಜ್ಬೇಗ್, ಮುಖಂಡರಾದ ತನ್ವೀರ್, ಶ್ರೀಧರ್, ಶ್ರೀನಾಥ್, ಸುರೇಶ್, ಮಂಜುನಾಥ್, ಮುಸ್ತು, ಅಧಿಕಾರಿಗಳಾದ ದಿಲೀಪ್ಕುಮಾರ್, ಚೇತನ್, ಸುಧಾ, ಸಮೀವುಲ್ಲಾ, ಎಜಾಜ್ಪಾಷ, ಬಾಲಚಂದ್ರ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!