ಭಾಷಾಜ್ಞಾನ ವಿದ್ಯಾರ್ಥಿಗಳಿಗೆ ಬಹುಮುಖ್ಯ. ಅದರಲ್ಲೂ ವ್ಯಾಕರಣದ ಕಲಿಕೆ ನಮ್ಮ ಭಾಷಾ ಬಳಕೆಯನ್ನು ಉತ್ತಮಗೊಳಿಸುತ್ತದೆ ಎಂದು ಬಿಜೆಪಿ ಮುಖಂಡ ಡಿ.ಆರ್.ಶಿವಕುಮಾರ್ಗೌಡ ತಿಳಿಸಿದರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ‘ಸಂಪೂರ್ಣ ಕನ್ನಡ ವ್ಯಾಕರಣ ಕಲಿಕಾ ಕ್ಯಾಲೆಂಡರ್’ ವಿದ್ಯಾರ್ಥಿಗಳಿಗೆ ವಿತರಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಅನುಕೂಲವಾಗುವ ರೀತಿ ಮತ್ತು ಅವರ ಭಾಷಾ ಜ್ಞಾನವನ್ನು ವೃದ್ಧಿಸಲು ನೆರವಾಗುವ ರೀತಿಯಲ್ಲಿ ಸೋಮಶೇಖರ್ ಎಂಬ ಶಿಕ್ಷಣ ತಜ್ಞರು ವ್ಯಾಕರಣವನ್ನು ಸರಳವಾಗಿ ರಚಿಸಿದ್ದಾರೆ. ಅವರ ಈ ರಚನೆಯು ನಮ್ಮ ಕ್ಷೇತ್ರದ ವಿದ್ಯಾರ್ಥಿಗಳಿಗೂ ತಲುಪಬೇಕು ಎಂಬ ಉದ್ದೇಶದಿಂದ ಕ್ಯಾಲೆಂಡರ್ ರೂಪದಲ್ಲಿ ಮುದ್ರಿಸಲಾಗಿದೆ. ಸುಮಾರು 10 ಸಾವಿರ ಈ ವ್ಯಾಕರಣದ ಕ್ಯಾಲೆಂಡರ್ಗಳನ್ನು ಮುದ್ರಿಸಿದ್ದು ತಾಲ್ಲೂಕಿನಾದ್ಯಂತ ವಿದ್ಯಾರ್ಥಿಗಳಿಗೆ ತಲುಪಿಸಲಾಗುವುದು ಎಂದು ಹೇಳಿದರು.
ಬಿಜೆಪಿ ಮುಖಂಡರಾದ ಸುರೇಂದ್ರಗೌಡ, ರವಿಕುಮಾರ್, ನರೇಶ್, ಚಲಪತಿ, ಮುನಿಕೃಷ್ಣಪ್ಪ, ಕಾಲೇಜಿನ ಉಪನ್ಯಾಕರಾದ ಮುರಳಿ, ಮುನಿರಾಜು, ಮಂಜುಳ ಹಾಜರಿದ್ದರು.
- Advertisement -
- Advertisement -
- Advertisement -







