23.1 C
Sidlaghatta
Friday, March 29, 2024

ಅಧ್ಯಯನವಿರಲಿ ಅಭ್ಯುದಯಕೆ

- Advertisement -
- Advertisement -

ಆಯುರ್ವೇದ ಗಂಥವಾದ ಚರಕ ಸಂಹಿತೆಯಲ್ಲಿ ಜ್ಞಾನವನ್ನು ಪಡೆಯುವ ವಿವಿಧ ವಿಧಾನಗಳು, ಅಧ್ಯಯನ ವಿಧಿಗಳು ಹೇಳಲ್ಪಟ್ಟಿದೆ. ಈ ವಿಶೇಷ ಅಂಶಗಳು ವಿದ್ಯಾರ್ಥಿಗಳ ಪ್ರಗತಿಗೆ ಸಹಕಾರಿ. ಈ ಅಂಶಗಳ ಮೇಲೆ ಬೆಳಕನ್ನು ಚೆಲ್ಲುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ.
1. ಅಧ್ಯಯನ ಮಾಡಬೇಕಾದ ವಿಷಯದ ಬಗ್ಗೆ ತಿಳಿವು ಇರಬೇಕು.
2. ವಿಷಯವನ್ನು ಕ್ರಮಬದ್ಧವಾಗಿ ಅಧ್ಯಯನ ಮಾಡಬೇಕು.
3. ಓದುವ ವಿಷಯವನ್ನು ಉದಾಹರಣೆಗಳೊಂದಿಗೆ, ಪ್ರಾಯೋಗಿಕಗಳ ಸಹಾಯದಿಂದ ಆರ್ಥಮಾಡಿಕೊಳ್ಳಬೇಕು.
4. ವಿಷಯವನ್ನು ತಿಳಿದವರ ಸಹಾಯದಿಂದ ತಿಳಿಯಬೇಕು.
5. ಅಧ್ಯಯನ ಮಾಡುವ ಸ್ಥಳ ಹಾಗೂ ವಾತಾವರಣ ಶುದ್ಧವಾದ ಗಾಳಿ ಬೆಳಕುಗಳಿಂದ ಕೂಡಿರಬೇಕು.
6. ಅಧ್ಯಯನ ಮಾಡುವ ಮೊದಲು ಸ್ನಾನ ಮಾಡಿಕೊಂಡು ಶುದ್ಧವಾದ ವಸ್ತ್ರವನ್ನು ಧರಿಸಿರಬೇಕು.
7. ಶಾಂತ ಮನಸ್ಸಿನಿಂದ ಕ್ರಮಬದ್ಧವಾಗಿ, ಹಂತ ಹಂತವಾಗಿ ವಿಷಯಗಳನ್ನು ಅರ್ಥಮಾಡಿಕೊಂಡು ಅಧ್ಯಯನ ಮಾಡಬೇಕು.
8. ವಿಷಯವನ್ನು ಅರ್ಥೈಸಿಕೊಂಡು ಮತ್ತೆ ಮತ್ತೆ ನೆನಪುಮಾಡಿಕೊಳ್ಳುತ್ತಾ ಓದಬೇಕು.
9. ಮುಸ್ಸಂಜೆ ಹೊತ್ತನ್ನು ಹೊರತುಪಡಿಸಿ ಬ್ರಾಹ್ಮೀ ಮೂಹೂರ್ತದಿಂದ (4.30ರಿಂದ 6.00 ಗಂಟೆಯವರೆಗೆ) ಆರಂಭಿಸಿ ರಾತ್ರಿಯವರೆಗೆ ಅಧ್ಯಯನ ಮಾಡಬಹುದು.
10. ಶುದ್ಧವಾದ ಸ್ಥಳದಲ್ಲಿ ಬೆನ್ನನ್ನು ನೇರವಾಗಿಟ್ಟುಕೊಂಡು ಸುಖವಾದ ಆಸೀನದಲ್ಲಿ ಕುಳಿತು ಓದಬೇಕು.
11. ಅಧ್ಯಯನವನ್ನು ಪ್ರಾರಂಭಿಸುವ ಮೊದಲು ದೇವರಿಗೆ ವಂದಿಸಿ ಗುರುಹಿರಿಯರನ್ನು ಸ್ಮರಿಸಬೇಕು.
12. ಓದಿ ತಿಳಿದುಕೊಂಡ ವಿಷಯವನ್ನು ಪ್ರಾಯೋಗಿಕವಾಗಿ ಉಪಯೋಗಿಸಿಕೊಳ್ಳಲು ಗೊತ್ತಿರಬೇಕು.
13. ಅಧ್ಯಯನ ಮಾಡುವಾಗ ಉದ್ವೇಗ, ಮಾನಸಿಕ ಒತ್ತಡ ಕೋಪತಾಪಗಳ ಪ್ರಭಾವವಿರದಂತೆ ಗಮನಿಸಿಕೊಳ್ಳಬೇಕು.
14. ಅಧ್ಯಯನ ಮಾಡುವ ಸಂದರ್ಭದಲ್ಲಿ ಅತಿಯಾಗಿ ಉಪ್ಪು-ಹುಳಿ-ಖಾರ ಪದಾರ್ಥಗಳು, ಎಣ್ಣೆ ಪದಾರ್ಥಗಳು, ಬೇಕರಿ ತಿಂಡಿ, ಪಿಡ್ಜಾ-ಬರ್ಗರ್ ಮೊದಲಾದ ಫಾಸ್ಟ್‍ಫುಡ್ ಸೇವನೆ ಸಲ್ಲದು. ಇದರಿಂದ ಶರೀರಕ್ಕೆ ಬೇಕಾಗುವ ಪೋಷಕಾಂಶಗಳು ದೊರೆಯುವುದಿಲ್ಲ. ಮನಸ್ಸೂ ಶಾಂತವಾಗಿರುವುದಿಲ್ಲ.
15. ಮೆದುಳಿಗೆ ಚುರುಕುತನವನ್ನು ಕೊಡುವಂತಹ ಆಹಾರಗಳಾದ ತಾಜಾ ಹಣ್ಣು-ಸೊಪ್ಪು-ತರಕಾರಿಗಳು, ಶುದ್ಧವಾದ ನೀರು, ಆಕಳ ಹಾಲು ತುಪ್ಪ ಮೊದಲಾದುವನ್ನು ಕಾಲಕ್ಕೆ ತಕ್ಕಂತೆ, ಹಸಿವಿಗೆ ಅನುಸಾರವಾಗಿ ಸೇವಿಸಬೇಕು.
16. ಮನಸ್ಸಿಗೆ ಹಿತವೆನಿಸುವ ವಾತಾವರಣದಲ್ಲಿ, ಓದುವ ಮನಸ್ಥಿತಿ ಇರುವ ಸ್ನೇಹಿತರೊಡನೆ ಅಧ್ಯಯನ ಮಾಡಬೇಕು.
17. ಚರಕಸಂಹಿತೆಯಲ್ಲಿ ಯಾವುದೇ ವಿಷಯದಲ್ಲಿ ಜ್ಞಾನವನ್ನು ಹೊಂದಲು ಬೇಕಾದ ಮೂರು ಉಪಾಯಗಳನ್ನು ಹೇಳಿದ್ದಾರೆ, ಅವುಗಳೆಂದರೆ:
1. ಆಧ್ಯಯನ: ವಿಷಯವನ್ನು ಸರಿಯಾಗಿ ಅಭ್ಯಾಸ ಮಾಡುವುದು.
2. ಅಧ್ಯಾಪನ: ನಾವು ತಿಳಿದುಕೊಂಡ ವಿಷಯವನ್ನು ಬೇರೆಯವರಿಗೆ ತಿಳಿಸುವುದು.
3. ತದ್ವಿದ್ಯಾ – ಸಂಭಾಷಾ: ತಿಳಿದುಕೊಂಡತಹ ವಿಷಯವನ್ನು ಕುರಿತಾಗಿ ತಜ್ಞರೊಡನೆ ವಿಚಾರ ವಿನಿಮಯಮಾಡಿಕೊಳ್ಳವುದು.
18. ಮೇಲಿನ ಮೂರೂ ವಿಧಾನಗಳಿಂದ ವಿಷಯದ ಗ್ರಹಿಕೆ, ವಿಷಯವನ್ನು ಅರ್ಥಮಾಡಿಕೊಳ್ಳುವುದು ಹಾಗೂ ಓದಿದ ವಿಷಯವನ್ನು ಪ್ರಾಯೋಗಿಕವಾಗಿ ಅಳವಡಿಸಿಕೊಳ್ಳುವುದು ಈ ಎಲ್ಲ ಕುಶಲತೆಗಳೂ ಲಭ್ಯವಾಗುತ್ತದೆ.
19. ಅಧ್ಯಯನ ಮಾಡಿ ತಿಳಿದುಕೊಂಡಂತಹ ವಿಷಯವನ್ನು ನೆನಪಿಟ್ಟುಕೊಳ್ಳಲು ಎಂಟು ವಿಧಾನಗಳನ್ನು ಚರಕಸಂಹಿತಯಲ್ಲಿ ಹೇಳಲ್ಪಟ್ಟಿದೆ ಅವುಗಳೆಂದರೆ:
1. ನಿಮಿತ್ತ: ಯಾವುದೇ ಕಾರಣವನ್ನು ನೋಡಿದಾಗ ಕ್ರಿಯೆಯನ್ನು ನೆನಪುಮಾಡಿಕೊಳ್ಳುವುದು ಉದಾಹರಣೆಗೆ ಕುದುರೆಯನ್ನು ನೋಡಿದಾಗ ಶಕ್ತಿಯನ್ನು ಅಳೆಯುವ ಅಶ್ವಶಕ್ತಿಯನ್ನು ಅಳೆಯುವ ಅಶ್ವಶಕ್ತಿ (Horsepower) ಯನ್ನು ನೆನಪು ಮಾಡಿಕೊಳ್ಳುವುದು.
2. ರೂಪಗ್ರಹಣ: ಆಕಾರ, ರೂಪ, ದೃಶ್ಯವನ್ನು ನೋಡುವಿಕೆ. ಉದಾಹರಣೆಗೆ ಆಕಳನ್ನು ನೋಡಿದಾಗ ಹಿಂದಿನ ಅನುಭವವು ನೆನಪಿಗೆ ಬಂದು ಅದು ಆಕಳು ಎಂದು ಗ್ರಹಿಸುತ್ತೇವೆ.
3. ಸಾದೃಶ್ಯ: ಹೋಲಿಕೆಗೆ ಅನುಸಾರವಾಗಿ ನೆನಪಿಟ್ಟುಕೊಳ್ಳುವಿಕೆ. ಉದಾಹರಣೆಗೆ: ಯಾವ ರೀತಿಯಲ್ಲಿ ನದಿಯು ಹೊಲಗದ್ದೆಗಳಿಗೆ ಬೇಕಾದ ನೀರನ್ನು ಒದಗಿಸುತ್ತದೋ ಅದೇ ರೀತಿಯಲ್ಲಿ ನಮ್ಮ ಶರೀರದ ಜೀವಕೋಶಗಳಿಗೆ ರಕ್ತಸಂಚಾರವಾಗುತ್ತದೆ.
4. ವೈಸಾದೃಶ್ಯ: ಒಂದು ವಸ್ತುವನ್ನು ನೋಡಿದಾಗ ಅದಕ್ಕೆ ತದ್ವರುದ್ಧವಾದುದನ್ನು ನೆನಪಿಸಿಕೊಳ್ಳುವುದು. ಉದಾಹರಣೆಗೆ ನೀರನ್ನು ನೋಡಿದಾಗ ಬೆಂಕಿಯನ್ನು ನೆನೆಸಿಕೊಳ್ಳುವುದು, ಹಾವನ್ನು ನೋಡಿದಾಗ ಮುಂಗುಸಿ ನೆನಪಾಗುವುದು ಇತ್ಯಾದಿ.
5. ಸತ್ವಾನುಬಂಧ: ಯಾವುದೇ ವಿಷಯವನ್ನು ಮತ್ತೆ ಮತ್ತೆ ಮನನ ಮಾಡಿಕೊಂಡಾಗ ಸ್ಪಷ್ಟವಾಗಿ ಮನದಟ್ಟಾಗುತ್ತದೆ ಮತ್ತು ನೆನಪಿನಲ್ಲಿ ಉಳಿಯುತ್ತದೆ.
6. ಅಭ್ಯಾಸ: ಯಾವುದೇ ವಿಷಯವನ್ನು ಮತ್ತೆ ಮತ್ತೆ ಮನನ ಮಾಡಿಕೊಂಡಾಗ ಸ್ಪಷ್ಟವಾಗಿ ಮನದಟ್ಟಾಗುತ್ತದೆ ಮತ್ತು ನೆನಪಿನಲ್ಲಿ ಉಳಿಯುತ್ತದೆ.
7. ಜ್ಞಾನಯೋಗ: ಯಾವುದೇ ವಿಷಯ ಸ್ಪಷ್ಟವಾಗಿ ಮನನವಾದ ಕೂಡಲೇ ಅದರ ಪ್ರಾಯೋಗಿಕ ಬಳಕೆಯನ್ನು ಅರ್ಥಮಾಡಿಕೊಳ್ಳಲು ಯತ್ನಸಿದರೆ ಆ ವಿಷಯ ಚೆನ್ನಾಗಿ ನೆನಪಿನಲ್ಲಿರುತ್ತದೆ. ಉದಾಹರಣೆಗೆ ನೀರು ಎಂದ ಕೂಡಲೇ ನೀರಿನ ಬಳಕೆ, ನೀರಿನ ಉಪಯೋಗ, ನೀರು ಹೇಗೆ ಆರೋಗ್ಯ ರಕ್ಷಣೆ ಮಾಡುತ್ತದೆ. ಪ್ರಾಣಿಗಳಿಗೆ ನೀರು ಎಷ್ಟು ಅವಶ್ಯಕ ಇಂಬಿತ್ಯಾದಿ ಪ್ರಾಯೋಗಿಕ ಅಂಶಗಳನ್ನು ನೆನೆದಾಗ ನೀರಿನ ಇಲ್ಲ ವಿಷಯಗಳೂ ಯಾವಾಗಲೂ ನೆನಪಿನಲ್ಲಿರುತ್ತದೆ.
8. ಪುನಃಶ್ರುತಿ: ಕೇಳಿದ ವಿಷಯವನ್ನು ಮತ್ತೆ ಮತ್ತೆ ಕೇಳುವುದರಿಂದ ಚೆನ್ನಾಗಿ ನೆನಪಿರುತ್ತದೆ. ಅದಕ್ಕಾಗಿಯೇ ಸಂಗೀತಶಾಸ್ತ್ರದಲ್ಲಿ ಕೇಳುವಿಕೆಗೆ ಹೆಚ್ಚು ಪ್ರಾಧಾನ್ಯತೆಯನ್ನು ಕೊಡಲಾಗಿದೆ. ಯಾವುದೇ ಜ್ಞಾನದ ಶಾಖೆಯಲ್ಲಿ ಶ್ರವಣದ ಮಹತ್ವವು ಬಹಳ ಹೆಚ್ಚು. ಮತ್ತೆ ಮತ್ತೆ ಕೇಳುವುದರಿಂದ ವಿಷಯವು ಮನಸ್ಸಿನಲ್ಲಿ ಚೆನ್ನಾಗಿ ಮುದ್ರಿತವಾಗುತ್ತದೆ.
20. ಈ ಎಂಟೂ ಅಂಶಗಳು ಬೇಕು ಅಧ್ಯಯನಕ್ಕೆ ಹಾಗೂ ಒಳ್ಳೆಯ ನೆನಪಿನಂಗಲಕ್ಕೆ.
21. ಅರ್ಥವಾಗದ ವಿಷಯಗಳನ್ನು ಗುರುಗಳಿಂದ ತಿಳಿದುಕೊಂಡು ಯಾವುದೇ ಒತ್ತಡವಿಲ್ಲದೆ ಅಧ್ಯಯನವನ್ನು ಆನಂದದಿಂದ ಮುಂದುವರೆಸಬೇಕು.
22. ಅಧ್ಯಯನಕ್ಕೆ ಬೇಕಾದ ಪರಿಕರ (ಪೆನ್, ಪುಸ್ತಕ, ಪೆನ್ಸಿಲ್) ಗಳನ್ನು ಮೊದಲೇ ಜೋಡಿಸಿಟ್ಟುಕೊಂಡಿರಬೇಕು. ಮಧ್ಯೆ ಮಧ್ಯೆ ಸೂಕ್ತ ರೀತಿಯಲ್ಲಿ ವಿಶ್ರಾಂತಿಯನ್ನು ಅನುಭವಿಸುತ್ತಾ ಅಧ್ಯಯನವನ್ನು ಮುಂದುವರೆಸಬೇಕು.
ಡಾ. ಶ್ರೀವತ್ಸ

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!