ಕೆಲವೊಂದು ಸಂದರ್ಭಗಳನ್ನು ಹೇಗೆ ನಿಭಾಯಿಸಬೇಕು ಎಂಬ ಗೊಂದಲ ಉಂಟಾಗುತ್ತದೆ. ಅದು ಸ್ನೇಹಿತ(ತೆ)ರ ಜೊತೆಗಿನ ಭಿನ್ನಾಭಿಪ್ರಾಯಗಳಿರಬಹುದು ಅಥವಾ ಸ್ಪರ್ಧೆಗಳಲ್ಲಿನ ಸೋಲಿರಬಹುದು ಅಥವಾ ಯಾವುದಾದರೂ ಭಯ ಕಾಡುತ್ತಿರಬಹುದು. ಅಂಥ ಸಂದರ್ಭಗಳಲ್ಲಿ ನಿಮ್ಮ ನಡೆ ಹೀಗಿರಲಿ.
1. ನಿಮ್ಮ ಒತ್ತಡ/ಪರಿಸ್ಥಿತಿಗಳನ್ನು ತಂದೆ-ತಾಯಿರೊಂದಿಗೆ ಹಂಚಿಕೊಳ್ಳಿರಿ.
2. ಯಾವ ಸಮಸ್ಯೆಯಾದರೂ ಅದಕ್ಕೆ ತಕ್ಕ ಪರಿಹಾರ ಇದ್ದೇ ಇರುತ್ತದೆ ಎಂಬುದನ್ನು ಮನದಟ್ಟು ಮಾಡಿಕೊಳ್ಳಿರಿ.
3. ಒಮ್ಮೆ ನಿಮ್ಮ ನಿರೀಕ್ಷೆ ವಿಫಲವಾದರೆ ಅದೇ ಕೊನೆಯೆಂದು ಭಾವಿಸಬೇಡಿ.
4. ಸೋಲೇ ಗೆಲುವಿನ ಸೋಪಾನ (ಮೆಟ್ಟಿಲು) ಎಂಬ ಸತ್ಯ ಸದಾ ನೆನಪಿನಲ್ಲಿರಲಿ.
5. ಸಕಾರಾತ್ಮಕವಾಗಿಯೇ ಸವಾಲನ್ನು ಎದುರಿಸಲು ಧೈರ್ಯವನ್ನು ತಂದುಕೊಳ್ಳಬೇಕು.
6. ತಂದೆ-ತಾಯಿಗಳ ನಿರೀಕ್ಷೆಗಳು ಹೆಚ್ಚೆಂದು ನಿಮಗೆ ಅನಿಸಿದರೆ ಅವರಿಗೆ ನೇರವಾಗಿ, ನಿಧಾನವಾಗಿ ತಿಳಿಸಿ ಹೇಳಿ.
7. ಒಮ್ಮೆ ತಂದೆ ತಾಯಿಯರು ಬೈದರೆ ಅದನ್ನು ಎಂದಿಗೂ ಅವಮಾನವೆಂದು ಪರಿಗಣಿಸದೇ ಅದರ ಹಿಂದಿನ ಕಾಳಜಿಯನ್ನು ಅರ್ಥ ಮಾಡಿಕೊಳ್ಳಿ
8. ಜೀವನದಲ್ಲಿ ಕೌಶಲಗಳು, ಹವ್ಯಾಸಗಳು ಅತಿ ಅವಶ್ಯ. ಅದಕ್ಕೆ ಸರಿಯಾದ ಸಮಯವನ್ನು ಕೊಡಿ.
9. ಆತ್ಮೀಯ ಸ್ನೇಹಿತರೊಂದಿಗೆ ಚರ್ಚಿಸಿ, ಕೆಟ್ಟ ಚಟಗಳಿಗೆ ಬಲಿಯಾಗಬೇಡಿರಿ. (ಕೆಲವು ಸ್ನೇಹಿತರು ನಿಮ್ಮನ್ನು ದುಶ್ಚಟಗಳಿಗೆ ಒಳಗಾಗುವಂತೆ ಪ್ರೇರೇಪಿಸುತ್ತಾರೆ. ನೆನಪಿರಲಿ)
10. ಯಾವುದೇ ಸಂದರ್ಭ ಬಂದರೂ ಕೂಡ, ಎಂಥ ಕಷ್ಟದ ಪರಿಸ್ಥಿತಿಯು ಬಂದರೂ ಸಹ ಧೈರ್ಯಗೆಡದೆ ಅದನ್ನು ಎದುರಿಸಲು ತಯಾರಾಗಿ. ಕಠಿಣ ಪರಿಸ್ಥಿತಿಗಳನ್ನು ಎದುರಿಸುವಾಗ ನೀವು ನಿಮ್ಮ ತಂದೆ-ತಾಯಿಯರ ಅಥವಾ ಹಿರಿಯರ ಸಹಾಯವನ್ನು ಪಡೆಯಿರಿ. ಅವರು ಅವರ ಜೀವನದ ಅನುಭವವನ್ನು ನಿಮಗೆ ತಿಳಿಸಿ ಧೈರ್ಯವನ್ನು ಕೊಡುತ್ತಾರೆ. ಆತ್ಮೀಯ ಬಂಧುಗಳೊಡನೆಯೂ ನೀವು ನಿಮ್ಮ ಮನಸ್ಸನ್ನು ಬಿಚ್ಚಿ ಮಾತನಾಡಿ ಅವರ ಸಹಾಯವನ್ನು ಪಡೆಯಿರಿ ಖಂಡಿತಾ ಪರಿಹಾರ ದೊರೆಯುತ್ತದೆ.
11. ಬೇರೆ ಬೇರೆ ಪರಿಸ್ಥಿತಿಗಳಿಗೆ ನಿಮ್ಮ ಸಿದ್ಧತೆ ಸೂಕ್ತ ರೀತಿಯಲ್ಲಿರಲಿ. ಸದಾ ಸಂತೋಷವನ್ನು ತರುವ ಸಿದ್ಧತೆಗಳನ್ನು ಮಾಡಿಕೊಳ್ಳಿರಿ. ಇದರಿಂದ ನಿಮ್ಮ ಆತ್ಮವಿಸ್ವಾಸವು ಹೆಚ್ಚುತ್ತದೆ.
ಡಾ. ಶ್ರೀವತ್ಸ
- Advertisement -
- Advertisement -
- Advertisement -
- Advertisement -