27.1 C
Sidlaghatta
Friday, November 7, 2025

ಕಳೆನಾಶಕದಿಂದ ಬೆಳೆ ನಾಶ

- Advertisement -
- Advertisement -

ದುಷ್ಕರ್ಮಿಗಳು ಔಷಧಿ ಸಿಂಪಡಿಸುವ ಡ್ರಮ್ಮಿಗೆ ಕಳೆನಾಶಕವನ್ನು ಬೆರೆಸಿದ್ದರಿಂದಾಗಿ ತಾಲ್ಲೂಕಿನ ಚಿಂತಡಪಿಯ ರೈತ ಸಿ.ಎಂ.ಮಾರುತಿ ಅವರ ಐದೂವರೆ ಎಕರೆ ಜಮೀನಿನಲ್ಲಿನ ಮೂರು ಬೆಳೆಗಳು ನಾಶವಾಗಿ ಸುಮಾರು ಐದು ಲಕ್ಷ ರೂಗಳ ನಷ್ಟವುಂಟಾಗಿದೆ.
ಕಳೆದ ಆರು ದಿನಗಳ ಹಿಂದೆ ಔಷಧಿ ಸಿಂಪಡಿಸಲು ತೋಟದಲ್ಲಿಟ್ಟಿದ್ದ ಡ್ರಮ್ಮಿಗೆ ದುಷ್ಕರ್ಮಿಗಳು ಕಳೆನಾಶಕವನ್ನು ಬೆರೆಸಿದ್ದಾರೆ. ತಿಳಿಯದೇ ಬೆಳಗಿನ ಜಾವ ಔಷಧಿಯೊಂದಿಗೆ ಡ್ರಮ್ಮಿನಲ್ಲಿದ್ದ ಕಳೆನಾಶಕ ಬೆರೆತ ನೀರನ್ನು ತನ್ನ ಐದೂವರೆ ಎಕರೆ ಜಮೀನಿನಲ್ಲಿದ್ದ ಬೀನ್ಸ್, ಶಾಮಂತಿ ಮತ್ತು ಹೂಕೋಸಿನ ನಾರಿಗೆ ಸಿಂಪಡಿಸಿ ತೆರಳಿದ್ದಾರೆ. ಪ್ರವಾಸಕ್ಕೆ ಹೋಗಿದ್ದ ರೈತ ಸಿ.ಎಂ.ಮಾರುತಿ ಐದು ದಿನಗಳ ತರುವಾಯ ಬಂದು ಜಮೀನಿಗೆ ನೋಡಿದಾಗ ಎಲೆಯೆಲ್ಲಾ ಒಣಗಿ ಉದುರಿ ಬೆಳೆಗಳೆಲ್ಲಾ ನಾಶವಾಗಿರುವುದು ಕಂಡುಬಂದಿದೆ.
ರೈತಸಂಘ ಹಾಗೂ ಹಸಿರುಸೇನೆ ಸದಸ್ಯರೊಂದಿಗೆ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾರೆ. ಗ್ರಾಮಾಂತರ ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ ಪ್ರದೀಪ್ ಪೂಜಾರಿ ದೂರು ದಾಖಲಿಸಿಕೊಂಡು ಸ್ಥಳಕ್ಕೆ ಭಾನುವಾರ ಭೇಟಿ ನೀಡಿ ಪರಿಶೀಲಿಸಿದ್ದಾರೆ.
`ರೈತನಿಗೆ ಆಗಿರುವ ನಷ್ಟಕ್ಕೆ ಸರ್ಕಾರ ಪರಿಹಾರ ನೀಡಬೇಕು. ರೈತರ ಬೆಳೆ ನಾಶಕ್ಕೆ ಕಾರಣವಾದ ದುಷ್ಕರ್ಮಿಗಳನ್ನು ಪತ್ತೆಹಚ್ಚಿ ಶಿಕ್ಷಿಸಬೇಕು’ ಎಂದು ರೈತಸಂಘ ಹಾಗೂ ಹಸಿರುಸೇನೆ ತಾಲ್ಲೂಕು ಅಧರ್ಯಕ್ಷ ರವಿಪ್ರಕಾಶ್ ಮತ್ತು ಕಾರ್ಯದರ್ಶಿ ಪ್ರತೀಶ್ ಈ ಸಂದರ್ಭದಲ್ಲಿ ಒತ್ತಾಯಿಸಿದ್ದಾರೆ.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!