ಗ್ರಾಮೀಣ ಪ್ರದೇಶಗಳಲ್ಲಿನ ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ರೈತಾಪಿ ವರ್ಗದ ಜನರು ಜೀವನ ಮಾಡುತ್ತಿದ್ದು, ಉತ್ಪಾದಕರು ಗುಣಮಟ್ಟದ ಹಾಲನ್ನು ಪೂರೈಕೆ ಮಾಡುವ ಮೂಲಕ ಸಹಕಾರಿ ಸಂಘಗಳನ್ನು ಉಳಿಸಿಕೊಂಡು ಹೋಗಬೇಕು ಎಂದು ಮೇಲೂರು ಗ್ರಾಮ ಪಂಚಾಯಿತಿ ಸದಸ್ಯ ಕೆ.ಮಂಜುನಾಥ್ ತಿಳಿಸಿದರು.
ತಾಲ್ಲೂಕಿನ ಚೌಡಸಂದ್ರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಈಚೆಗೆ ಆಯೋಜನೆ ಮಾಡಲಾಗಿದ್ದ ೨೦೧೪-–೧೫ ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಅವರು ಮಾತನಾಡಿದರು.
ತೀವ್ರ ಬರಗಾಲಕ್ಕೆ ಒಳಗಾಗಿರುವ ಬಯಲು ಸೀಮೆ ಭಾಗದ ರೈತಾಪಿ ವರ್ಗದ ಜನರು, ಕುಡಿಯುವ ನೀರಿಗೂ ಪರದಾಡುವಂತಹ ಪರಿಸ್ಥಿತಿಯಿದ್ದರೂ ಕೂಡಾ ಹಾಲಿನ ಉತ್ಪಾದನೆಯಲ್ಲಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನಕ್ಕೆ ಪೈಪೋಟಿ ಮಾಡುತ್ತಿದ್ದು, ಉತ್ತಮ ಗುಣಮಟ್ಟದ ಹಾಲನ್ನು ಪೂರೈಕೆ ಮಾಡುವ ಮೂಲಕ ಸಹಕಾರ ಸಂಘದ ಅಭಿವೃದ್ದಿಗಾಗಿ ಶ್ರಮಿಸಬೇಕು. ರಾಸುಗಳಿಗೆ ಸಹಕಾರ ಸಂಘದಿಂದ ಸಿಗುವಂತಹ ಪೌಷ್ಠಿಕಾಂಶ ಭರಿತವಾದ ಆಹಾರಗಳನ್ನು ನೀಡಬೇಕು. ಪಶುಆಹಾರಗಳನ್ನು ಬಳಸಿದಲ್ಲಿ ರಾಸುಗಳು ರೋಗ ಮುಕ್ತವಾಗಲು ಸಹಕಾರಿಯಾಗುತ್ತದೆ ಎಂದರು.
ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸಿ.ಆರ್.ಪ್ರಭಾಕರ್ ಮಾತನಾಡಿ ಉತ್ಪಾದಕರು ಸಹಕಾರ ಸಂಘವನ್ನು ಅಭಿವೃದ್ಧಿಯತ್ತ ಕೊಂಡೊಯ್ದು, ಸಂಘದಿಂದ ಸಿಗುವಂತಹ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಯಶಸ್ವಿನಿ ಯೋಜನೆ ಸೇರಿದಂತೆ ಸರ್ಕಾರದಿಂದ ನೀಡುವಂತಹ ಪ್ರೋತ್ಸಾಹಧನವನ್ನು ಪಡೆಯುವುದರ ಜೊತೆಗೆ ಗುಣಮಟ್ಟದ ಹಾಲನ್ನು ನೀಡಿ ಸಹಕಾರ ಸಂಘಗಳ ಅಭಿವೃದ್ಧಿಗೆ ನೆರವಾಗಬೇಕು, ಎಸ್.ಎನ್.ಎಫ್. ಮತ್ತು ಫ್ಯಾಟ್ನ ಅಂಶಗಳ ಬಗ್ಗೆ ಕಡ್ಡಾಯ ಮಾಡಬಾರದು ಎಂದು ಈಗಾಗಲೇ ಕೋಚಿಮುಲ್ಗೆ ಮನವಿಗಳನ್ನು ಸಲ್ಲಿಸಲಾಗಿದ್ದು, ಒಪ್ಪಿಗೆ ನೀಡದಿದ್ದರೆ, ಮುಂದಿನ ದಿನಗಳಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಎಲ್ಲಾ ತಾಲ್ಲೂಕುಗಳಲ್ಲಿನ ಉತ್ಪಾದಕರು ಒಂದು ದಿನ ಹಾಲಿನ ಪೂರೈಕೆ ಸ್ಥಗಿತಗೊಳಿಸುವ ಮೂಲಕ ಪ್ರತಿಭಟನೆ ನಡೆಸಲು ತೀರ್ಮಾನ ಕೈಗೊಳ್ಳುವ ಮುನ್ಸೂಚನೆಗಳು ಇವೆ ಎಂದರು.
ಕೋಚಿಮುಲ್ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಎಚ್.ಎಸ್.ಉಮೇಶ್ರೆಡ್ಡಿ, ಮೇಲೂರು ಗ್ರಾಮ ಪಂಚಾಯತಿ ಉಪಾಧ್ಯಕ್ಷ ಆಂಜನೇಯರೆಡ್ಡಿ, ಸದಸ್ಯ ಶ್ರೀನಿವಾಸ್, ನಿರ್ದೇಶಕರಾದ ಸಿ.ಆರ್.ನಾಗೇಶ್, ಸಿ.ಎಚ್.ಆನಂದ್, ಸಿ.ಆರ್.ರಾಜಣ್ಣ, ಎಂ.ಕೃಷ್ಣಪ್ಪ, ಎಂ.ಕ್ಯಾತಪ್ಪ, ಸಿ.ಎಸ್.ರಾಮಾಂಜಿನಪ್ಪ, ಸಿ.ಎನ್.ರಾಮಕೃಷ್ಣಪ್ಪ, ಸಿ.ಎಂ.ರಾಮಾಂಜಿನಪ್ಪ, ಆಂಜನಮ್ಮ, ದ್ಯಾವಮ್ಮ, ವೆಂಕಟೇಶ್ಮೂರ್ತಿ, ಕಾರ್ಯನಿರ್ವಾಹಣಾಧಿಕಾರಿ ಸಿ.ಆರ್.ರವಿಚಂದ್ರ, ಸಿ.ಎನ್.ವೆಂಕಟರಾಯಪ್ಪ, ಸಿ.ಎನ್. ಮಂಜುನಾಥ್, ಶ್ರೀನಿವಾಸಮೂರ್ತಿ, ಚನ್ನೇಗೌಡ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -