ಚಿತ್ರದುರ್ಗದ ಚಿಂತನ ಪ್ರಕಾಶನ ನಡೆಸಿದ ಚಿಂತನ ವಿಜ್ಞಾನ ರಾಷ್ಟ್ರ ಮಟ್ಟದ ಪರೀಕ್ಷೆಯಲ್ಲಿ ತಾಲ್ಲೂಕಿನ ಸುಗಟೂರು ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ೮ ನೇ ತರಗತಿ ವಿದ್ಯಾರ್ಥಿನಿ ಎಸ್.ಆರ್.ಮಾನಸ ರಾಜ್ಯ ಮಟ್ಟದ ಪ್ರಥಮ ರ್ಯಾಂಕ್ ಪಡೆದಿದ್ದಾಳೆ.
ಏಳನೆಯ ತರಗತಿಯ ಎಸ್.ಕೆ.ಸುದರ್ಶನ್ ಜಿಲ್ಲಾ ಮಟ್ಟದಲ್ಲಿ ಪ್ರಥಮ ರ್ಯಾಂಕ್, ೫ ನೇ ತರಗತಿಯ ಮಧುಮತಿ ಮತ್ತು ೬ ನೇ ತರಗತಿಯ ಎಸ್.ಆರ್.ಚಂದನ ತಾಲ್ಲೂಕು ಮಟ್ಟದ ಪ್ರಥಮ ರ್ಯಾಂಕ್ ಗಳಿಸಿದ್ದಾರೆ.
ಉಳಿದಂತೆ ಪರೀಕ್ಷೆ ಬರೆದಿದ್ದ ಸುಮಾರು ೨೫ ಮಂದಿ ವಿದ್ಯಾರ್ಥಿಗಳು ಶಾಲಾಮಟ್ಟದ ಪ್ರಥಮ ರ್ಯಾಂಕ್ ಪಡೆದಿದ್ದು, ವಿದ್ಯಾರ್ಥಿಗಳನ್ನು ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ, ಎಸ್.ಡಿ.ಎಂಸಿ ಅಧ್ಯಕ್ಷ ಎಸ್.ಆರ್.ನಾಗೇಶ್ಮತ್ತು ಸದಸ್ಯರು, ಬೋಧಕವರ್ಗದವರು ಅಭಿನಂದಿಸಿದ್ದಾರೆ.