ನಗರದ ಚಿಂತಾಮಣಿ ಬೈಪಾಸ್ ರಸ್ತೆಯ ಪ್ರಣಾಮ್ ಧಾಬಾ ಬಳಿಯ ತಿರುವಿನಲ್ಲಿ ಬುಧವಾರ ಸಂಜೆ ಲಾರಿ ಮತ್ತು ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರಿಗೂ ಕಾಲು ಮುರಿದಿದೆ.
ಬೈಕ್ ಸವಾರರಾದ ರಾಘವೇಂದ್ರ(22) ಮತ್ತು ವಿಜಯ್(20) ಬಸ್ಸ್ಟಾಂಡ್ ಕಡೆಯಿಂದ ಬರುತ್ತಿದ್ದರು, ಲಾರಿಯು ಚಿಂತಾಮಣಿ ಕಡೆಯಿಂದ ಬರುತ್ತಿತ್ತು. ಕಾಲು ಮುರಿತಕ್ಕೊಳಗಾದ ಬೈಕ್ ಸವಾರರನ್ನು ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರಕ್ಕೆ ಕರೆದೊಯ್ಯಲಾಯಿತು. ಲಾರಿ ಚಾಲಕ ಪರಾರಿಯಾಗಿದ್ದು, ಲಾರಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
- Advertisement -
- Advertisement -
- Advertisement -
- Advertisement -