34.1 C
Sidlaghatta
Saturday, April 20, 2024

ಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯದಿಂದ ಲೋಕಕಲ್ಯಾಣಾರ್ಥ ರಾಜಯೋಗ ಧ್ಯಾನ

- Advertisement -
- Advertisement -

ವಿಶ್ವ ಶಾಂತಿ ಹಾಗೂ ಲೋಕ ಕಲ್ಯಾಣಾರ್ಥವಾಗಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯದಿಂದ ಸಾಮೂಹಿಕವಾಗಿ ರಾಜಯೋಗ ಧ್ಯಾನವನ್ನು ನಡೆಸಲಾಯಿತು.
ಚಿಂತಾಮಣಿ ರಸ್ತೆಯಲ್ಲಿರುವ ವೀರಾಪುರದ ಗವಿಗಂಗಾಧರೇಶ್ವರ ದೇವಾಲಯದ ಗುಟ್ಟದಲ್ಲಿ ಭಾನುವಾರ ನೆರೆದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯದ ಸದಸ್ಯರು ೩ ಗಂಟೆಗಳಿಗೂ ಹೆಚ್ಚು ಕಾಲ ಸಾಮೂಹಿಕವಾಗಿ ರಾಜಯೋಗ ಧ್ಯಾನವನ್ನು ಮಾಡಿದರು.
ಇತ್ತೀಚೆಗೆ ನಡೆದ ನೇಪಾಳದ ಭೂಕಂಪದಲ್ಲಿ ಮಡಿದ ಸಾವಿರಾರು ಮಂದಿ ಸಹೋದರರ, ಸಹೋದರಿಯರು ಸೇರಿದಂತೆ ಎಲ್ಲರ ಆತ್ಮಕ್ಕೂ ಶಾಂತಿ, ಮೋಕ್ಷ ದೊರಕಲೆಂದು ಈ ಯೋಗ ಧ್ಯಾನವನ್ನು ನಡೆಸುತ್ತಿದ್ದೇವೆ ಎಂದು ಬ್ರಹ್ಮಕುಮಾರಿಯ ಜಯಕ್ಕ ತಿಳಿಸಿದರು.
ಕಾಲ ಕಾಲಕ್ಕೆ ಮಳೆ ಬೆಳೆ ಆಗುತ್ತಿಲ್ಲ. ಇದಲ್ಲದೆ ಜನರಲ್ಲಿ ದುರಾಸೆ ನೆಲೆಸಿ ಶಾಂತಿ, ನೆಮ್ಮದಿ, ಆರೋಗ್ಯ ಇಲ್ಲದಾಗಿದೆ. ಹಾಗಾಗಿ ಎಲ್ಲೆಲ್ಲೂ ಅಶಾಂತಿಯೆ ನೆಲೆಸಿದೆ. ಆದ್ದರಿಂದ ಈ ಲೋಕದಲ್ಲಿ ಸುಖ ಶಾಂತಿ ನೆಮ್ಮದಿಯೂ ನೆಲೆಸಲೆಂಬುದು ಈ ಧ್ಯಾನದ ಉದ್ದೇಶವಾಗಿದೆ ಎಂದು ಅವರು ವಿವರಿಸಿದರು.
ಶಿಡ್ಲಘಟ, ಮೇಲೂರು, ಮಳ್ಳೂರು ಶಾಖೆಗಳಿಂದ ವಿದ್ಯಾರ್ಥಿಗಳಲ್ಲದೆ ಇತರರೂ ಈ ಸಾಮೂಹಿಕ ಯೋಗ ಧ್ಯಾನದಲ್ಲಿ ಭಾಗವಹಿಸಿದ್ದರು. ಧ್ಯಾನದ ನಂತರ ಸಾಮೂಹಿಕ ಪ್ರಾರ್ಥನೆ ಹಾಗೂ ಭೋಜನ ಕಾರ್ಯಕ್ರಮವೂ ನಡೆಯಿತು.
ಮಂಜನಾಥ್, ಚಂದ್ರಶೇಖರ್, ಪಿಳ್ಳವೆಂಕಟಸ್ವಾಮಿ, ನಾರಾಯಣಸ್ವಾಮಿ, ಮುನಿರೆಡ್ಡಿ, ಅರುಣ್ಕುಮಾರ್, ಅಮರ್, ದೇವಿಕಾ ಮತ್ತಿತರರು ಧ್ಯಾನದಲ್ಲಿ ಭಾಗವಹಿಸಿದ್ದರು.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!