ಬಡ ಹುಡುಗರಿಗೆ ವೇದಪಾಠವನ್ನು ಕಲಿಸಿ ಅವರು ಜೀವನದಲ್ಲಿ ಒಂದು ನೆಲೆ ಕಂಡುಕೊಳ್ಳಲು ಕಾರಣರಾದ ಸೋಮೇಶ್ವರ ನಾರಾಯಣಶಾಸ್ತ್ರಿಗಳು ಪ್ರಾತಃಸ್ಮರಣೀಯರು ಎಂದು ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಎಂ.ವಾಸುದೇವರಾವ್ ತಿಳಿಸಿದರು.
ನಗರದ ಕೆ.ಎಚ್.ಬಿ ಕಾಲೋನಿಯ ಮಹಾಗಣಪತಿ ಮತ್ತು ಗಾಯಿತ್ರಿ ದೇವಸ್ಥಾನದಲ್ಲಿ ಮಂಗಳವಾರ ಜಿಲ್ಲಾ ವಿಪ್ರ ಪೌರೋಹಿತರ ಮತ್ತು ಆಗಮಿಕರ ವಿಶ್ವಸ್ಥ ಮಂಡಲಿಯ ಗೌರವಾಧ್ಯಕ್ಷ ಸೋಮೇಶ್ವರ ನಾರಾಯಣಶಾಸ್ತ್ರಿಯವರ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.
ಜ್ಞಾನವನ್ನು ಹಂಚುವವರು ಶ್ರೇಷ್ಠರು. ತಾವು ಅನುಸರಿಸುತ್ತಿರುವ ಧರ್ಮ ಹಾಗೂ ತಮ್ಮನ್ನು ಒಳಗೊಳ್ಳುವ ಸಮಾಜಕ್ಕೆ ನಾವು ಸದಾ ಋಣಿಗಳಾಗಿರುತ್ತೇವೆ. ವೇದಪಾಠ ಶಾಲೆಯನ್ನು ನಡೆಸುತ್ತಾ ಬಡಹುಡುಗರಿಗೆ ಉಚಿತವಾಗಿ ಕಲಿಸುತ್ತಾ ಸಮಾಜಸೇವೆಯನ್ನು ನಾರಾಯಣಶಾಸ್ತ್ರಿಗಳು ಮಾಡಿ ಮಾದರಿಯಾಗಿದ್ದಾರೆ ಎಂದು ನಾರಾಯಣಶಾಸ್ತ್ರಿಗಳ ಸಾಧನೆ ಹಾಗೂ ಕೊಡುಗೆಗಳನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ಎಲ್ಲರೂ ಮೌನಾಚರಣೆಯ ಮೂಲಕ ಮೃತರ ಆತ್ಮಕ್ಕೆ ಶಾಂತಿ ಕೋರಿದರು.
ತಾಲ್ಲೂಕು ಕಸಾಪ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ವಿಪ್ರ ಪೌರೋಹಿತರ ಮತ್ತು ಆಗಮಿಕರ ವಿಶ್ವಸ್ಥ ಮಂಡಲಿಯ ಜಿಲ್ಲಾ ಅಧ್ಯಕ್ಷ ಗುರುಶರ್ಮ, ತಾಲ್ಲೂಕು ಅಧ್ಯಕ್ಷ ವೈ.ಎನ್.ದಾಶರಥಿ, ಬ್ರಾಹ್ಮಣ ಮಹಾ ಸಭಾ ತಾಲ್ಲೂಕು ಅಧ್ಯಕ್ಷ ಎ.ಎಸ್.ರವಿ, ಎಸ್.ಸತ್ಯನಾರಾಯಣರಾವ್, ಉಮಾಶಂಕರ್ ಶರ್ಮ, ಸಿ.ಕೆ.ಸುದರ್ಶನ್, ಬಿ.ಕೃಷ್ಣಮೂರ್ತಿ, ರಾಮಾಂಜಿಭಟ್ಟ, ನಟರಾಜ್, ಕೆ.ಎಸ್.ಕೃ್ಣಮೂರ್ತಿ, ಹರೀಶ್, ರಾಮದಾಸು, ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -
- Advertisement -