ನಗರದಲ್ಲಿ ಶುಕ್ರವಾರ ತಾಲ್ಲೂಕಿನ ಕಾಳನಾಯಕನಹಳ್ಳಿಯ ರತ್ನಾವಳಿ ನಾಟ್ಯ ಕ್ರೀಡಾ ಮತ್ತು ಸಾಮಾಜಿಕ ಅಭಿವೃದ್ಧಿ ಸಂಸ್ಥೆ ಸದಸ್ಯರು ಆರ್ಥಿಕ ಶಿಕ್ಷಣ ಜಾಗೃತಿ ಮೂಡಿಸುವ ಬೀದಿ ನಾಟಕವನ್ನು ಪ್ರದರ್ಶಿಸಿದರು.
ತಾಲ್ಲೂಕಿನ ದಿಬ್ಬೂರಹಳ್ಳಿ, ಸಾದಲಿ ಮತ್ತು ಅಬ್ಲೂಡು ಗ್ರಾಮಗಳಲ್ಲಿ ‘ಬ್ಯಾಂಕ್ ಖಾತೆ ಇದ್ದೋನೆ ಬಾಸು, ಖಾತೆ ಇಲ್ದಿದ್ರೆ ಆಗೋದೆ ಲಾಸು’ ಎಂಬ ಬೀದಿ ನಾಟಕವನ್ನು ಪ್ರದರ್ಶಿಸಿ, ನಗರದ ತಾಲ್ಲೂಕು ಕಚೇರಿಯ ಮುಂದೆಯೂ ಪ್ರದರ್ಶಿಸಿದರು.
‘ಸಾರ್ವಜನಿಕರು ಬ್ಯಾಂಕಿನ ಮೂಲಕ ವ್ಯವಹಾರ ಮಾಡುವುದರಿಂದ ಆಗುವ ಅನುಕೂಲಗಳು ಹಾಗೂ ಬ್ಯಾಂಕಿನ ಸೇವೆಯಿಂದ ವಂಚಿತರಾಗಿರುವ ಗ್ರಾಮೀಣರಿಗೆ ಈ ಬೀದಿ ನಾಟಕದ ಮೂಲಕ ಅರಿವು ಮೂಡಿಸುವುದು ನಮ್ಮ ಉದ್ದೇಶವಾಗಿದೆ’ ಎಂದು ರತ್ನಾವಳಿ ನಾಟ್ಯ ಕ್ರೀಡಾ ಮತ್ತು ಸಾಮಾಜಿಕ ಅಭಿವೃದ್ಧಿ ಸಂಸ್ಥೆಯ ಕೆ.ಎ.ರಾಜಪ್ಪ ತಿಳಿಸಿದರು.
ಬೀದಿ ನಾಟಕದಲ್ಲಿ ಕೆ.ಎ.ರಾಜಪ್ಪ, ಎಂ.ಸಿ.ಜ್ಯೋತಿ, ಆರ್.ಮುನಿಸ್ವಾಮಿ, ಎ.ಪ್ರಭಾವತಿ, ಎನ್.ವೆಂಕಟರಾಜಮ್ಮ, ಆರ್.ದೀಪ, ವಿ.ಚಿಕ್ಕರೆಡ್ಡಪ್ಪ, ಎಂ.ವಿ.ಗೋವಿಂದರಾಜು ಅಭಿನಯಿಸಿದರು.
- Advertisement -
- Advertisement -
- Advertisement -
- Advertisement -