ನಾಗರೀಕ ಸಮಾಜದಲ್ಲಿ ಮರೆಯಾಗುತ್ತಿರುವ ಭಾರತೀಯ ಸಂಸ್ಕøತಿ ಉಳಿಯಬೇಕಾದರೆ ಅದು ಹಳ್ಳಿಗಳಿಂದ ಮಾತ್ರ ಸಾಧ್ಯ, ಹಳ್ಳಿಗಳು ಉಳಿದರೆ ಮಾತ್ರ ದೇಶದ ಉಳಿವು ಸಾಧ್ಯ ಎಂದು ಅಖಿಲ ಭಾರತ ಸೇವಾ ಪ್ರಮುಖ್ ಸೀತಾರಾಮ ಕೆದಿಲಾಯ ಹೇಳಿದರು.
ಗ್ರಾಮ ವಿಕಾಸದ ಧ್ಯೇಯದೊಂದಿಗೆ ಕಾಲ್ನಡಿಗೆಯ ಮೂಲಕ ದೇಶದಾಧ್ಯಂತ ಸಂಚರಿಸುತ್ತಿರುವ ಭಾರತ ಪರಿಕ್ರಮ ಯಾತ್ರೆ ಶುಕ್ರವಾರ ತಾಲೂಕಿನ ಹಂಡಿಗನಾಳ ಗ್ರಾಮದಿಂದ ಹೊರಟು ಚಿಕ್ಕದಾಸೇನಹಳ್ಳಿ ಗ್ರಾಮಕ್ಕೆ ತಲುಪಿದೆ.
ಹಂಡಿಗನಾಳದಿಂದ ಮುಂಜಾನೆ ಹೊರಟ ಪಾದಯಾತ್ರೆ ನಗರಕ್ಕೆ ಆಗಮಿಸುತ್ತಿದ್ದಂತೆ ನೂರಾರು ಸ್ವಯಂಸೇವಕರು ಸೇರಿದಂತೆ ಪತಂಜಲಿ ಯೋಗ ಪಟುಗಳು ಅವರನ್ನು ಬರಮಾಡಿಕೊಂಡು ಅವರೊಂದಿಗೆ ಚಿಕ್ಕದಾಸೇನಹಳ್ಳಿಯವರೆಗೂ ಯೋಗನಡೆಯ ಮೂಲಕ ಸಾಗಿದರು.
ಮಾರ್ಗ ಮಧ್ಯ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಶ್ರೀಗಳು ಗ್ರಾಮಗಳು ಅಭಿವೃದ್ಧಿ ಹೊಂದಿದಾಗ ಮಾತ್ರ ದೇಶದ ಅಭಿವೃದ್ಧಿ ಹೊಂದಲು ಸಾಧ್ಯ ಹಾಗಾಗಿ ಪ್ರತಿಯೊಬ್ಬರೂ ಗ್ರಾಮಗಳ ಅಭಿವೃದ್ಧಿಯತ್ತ ಗಮನಹರಿಸಬೇಕು. ನಗರ ಜೀವನದ ಮೇಲಿರುವ ವ್ಯಾಮೋಹವನ್ನು ಬಿಟ್ಟು ಹಳ್ಳಿಗಳಲ್ಲಿನ ಗೋ ಸಂಪತ್ತು, ಗ್ರಾಮದ ಕುಲಕಸುಬು, ಸಂಸ್ಕøತಿ ಹಾಗು ಗ್ರಾಮೀಣ ಆಚಾರ ವಿಚಾರ, ವೈದ್ಯ ಪದ್ದತಿ ಮತ್ತಿತರ ವಿಚಾರಗಳ ಬಗ್ಗೆ ಸಾರ್ವಜನಿಕರೊಂದಿಗೆ ಸಂವಾದ ನಡೆಸಿ ಗ್ರಾಮ ಸೇವೆಯೇ ರಾಮ ಸೇವೆ ಎನ್ನುವುದನ್ನು ಅರಿತು ಎಲ್ಲರೂ ಹಳ್ಳಿಗಳ ಏಳಿಗೆಗಾಗಿ ಶ್ರಮಿಸಬೇಕು ಎಂದರು.
ಈ ಸಂದರ್ಭದಲ್ಲಿ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಶ್ರೀಕಾಂತ್, ಕೇಶವಮೂರ್ತಿ, ಸರಸ್ವತಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಶ್ರೀಕಾಂತ್, ಆರ್ಎಸ್ಎಸ್ ನ ಅಶ್ವತ್ಥ್, ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -







