19.5 C
Sidlaghatta
Sunday, July 20, 2025

ಮನೆಗೊಂದು ಮನಕ್ಕೊಂದು ಗಿಡ ನೆಟ್ಟು ಪೋಷಿಸಬೇಕು

- Advertisement -
- Advertisement -

ಮನೆಗೊಂದು ಮನಕ್ಕೊಂದು ಗಿಡ ನೆಟ್ಟು ಪೋಷಿಸಬೇಕು. ನಮಗೆ ಬಾಯರಿಕೆಯಾದರೆ ನೀರನ್ನು ಕೇಳಿ ಪಡೆಯುತ್ತೇವೆ ಆದರೆ ಪ್ರಾಣಿಗಳಾಗಲಿ ಪಕ್ಷಿಗಳಾಗಲಿ ಕೇಳುವುದಿಲ್ಲ. ಈ ಹಿನ್ನಲೆಯಲ್ಲಿ ಪರಿಸರವನ್ನು ಉಳಿಸಿ ಬೆಳಸಬೇಕಿದೆ ಎಂದು ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ ತಿಳಿಸಿದರು.
ನಗರದ ಗಾರ್ಡನ್ ರಸ್ತೆಯಲ್ಲಿರುವ ಪುರಾನಾ ಮಕಾನ್ ಹಾಗೂ ಖಾಲೆ ಮಸ್ತಾನ್ ಷಾವಲಿ ದರ್ಗಾ ಮತ್ತು ಕೆ.ಇ.ಬಿ ಆವರಣದಲ್ಲಿ ಗುರುವಾರ 150 ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇಂದಿನ ದಿನದಲ್ಲಿ ಮರಗಳನ್ನು ಕಡಿಯುವ ಸಂಖ್ಯೆ ಹೆಚ್ಚಾಗಿದೆ. ಆದರೆ ಸಸಿಗಳನ್ನು ನೆಟ್ಟು ಪೋಷಣೆ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ, ಇದರ ಜೊತೆಯಲ್ಲಿ ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ಬಳಕೆ ಹೆಚ್ಚಾಗುತ್ತಿದೆ, ಇದರಿಂದ ಭೂಮಿ ಹಾಳಾಗುತ್ತಿದೆ. ಇದರ ಬಗ್ಗೆ ಯಾರು ಸಹಾ ಆಲೋಚನೆ ಮಾಡುತ್ತಿಲ್ಲ, ಈ ಹಿನ್ನಲೆಯಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದರ ಮೂಲಕ ಪರಿಸರವನ್ನು ಉಳಿಸಿ ಬೆಳಸುವಂತ ಕೆಲಸ ಮಾಡಬೇಕಿದೆ ಎಂದು ನುಡಿದರು.
ಜಾಮಿಯಾ ಮಸೀದಿ ಅಧ್ಯಕ್ಷ ತಾಜ್ಪಾಷ, ಮದೀನಾ ಮಸೀದಿಯ ಮುನೀರ್, ಬಾಬು, ಷಫೀವುಲ್ಲಾ, ಮೌಲಾ, ಖಾಜಾ, ಟಿ.ಎಸ್.ಎಸ್.ಮೌಲಾ, ಎಸ್.ಎನ್.ಕ್ರಿಯಾ ಟ್ರಸ್ಟ್ನ ಬೆಳ್ಳೂಟಿ ರಮೇಶ್, ಛಲಪತಿ, ಮುನಿರಾಜು, ಮಳಮಾಚನಹಳ್ಳಿ ಸಂತೋಷ್, ಷಬ್ಬೀರ್, ಜಬೀವುಲ್ಲಾ, ಜಮೀರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!