ನಗರದ ದಿಬ್ಬೂರಹಳ್ಳಿ ರಸ್ತೆಯಲ್ಲಿರುವ ಅಮೀರ್ಬಾಬಾ ದರ್ಗಾ ಬಳಿ ಗುರುವಾರ ಟಿಪ್ಪೂಸುಲ್ತಾನ್ ಸೆಕ್ಯೂಲರ್ಸೇನೆ ಹಾಗೂ ಯೂನಿಟಿ ಆಫ್ ಸಿಲ್ಸಿಲಾ ಸಂಘಟನೆಗಳು ಮಾಜಿ ರಾಷ್ಟ್ರಪತಿ ಡಾ.ಅಬ್ದುಲ್ ಕಲಾಂ ಅವರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಿ ಪ್ರಾರ್ಥನೆ ಸಲ್ಲಿಸಿದರು.
‘ಜಾತಿಯನ್ನು ಮೀರಿದ ದೇಶದ ಪ್ರಗತಿಯೆಡೆಗೆ ಸದಾ ತುಡಿಯುತ್ತಿದ್ದ ಮಹಾನ್ ವ್ಯಕ್ತಿ ಮಾಜಿ ರಾಷ್ಟ್ರಪತಿ ಡಾ.ಅಬ್ದುಲ್ ಕಲಾಂ ಅವರು. ಯುವಕರು ಮತ್ತು ಮಕ್ಕಳಿಗೆ ಸದಾ ಮಾರ್ಗದರ್ಶನ ಮಾಡುತ್ತಾ ಕನಸನ್ನು ಬಿತ್ತುತ್ತಿದ್ದರು. ಅವರ ಉದ್ದೇಶಗಳನ್ನು ಕನಸುಗಳನ್ನು ಸಾಕಾರಗೊಳಿಸುವುದು ನಾವು ಅವರಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ’ ಎಂದು ಈ ಸಂದರ್ಭದಲ್ಲಿ ಯೂನಿಟಿ ಆಫ್ ಸಿಲ್ಸಿಲಾ ಸಂಘಟನೆಯ ಅಧ್ಯಕ್ಷ ಮಹಮ್ಮದ್ ಅಸದ್ ತಿಳಿಸಿದರು.
ಜಿಯಾವುಲ್ಲಾ, ಎಕ್ಬಾಲ್, ಇಮ್ತಿಯಾಜ್ ಪಾಷ, ನಿಜಾಮ್ ಪಾಷ, ರಹಮತ್, ಮಹಮ್ಮದ್ ಅಸದ್, ಅಕ್ರಮ್ ಪಾಷ, ಆರುನ್, ಉಮರ್, ಮುದಾಸಿರ್, ರಹಮತ್, ಮೌಲ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -