ಯುವಕರು ಗ್ರಾಮಾಭಿವೃದ್ಧಿಯ ಕನಸು ಹಾಗೂ ಪರಿಸರ ಕಾಳಜಿಯಿಂದ ಕಾರ್ಯಪ್ರವೃತ್ತರಾಗಿರುವುದು ಮಾದರಿಯಾಗಿದೆ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ತಾಲ್ಲೂಕಿನ ಎಲ್.ಮುತ್ತುಗದಹಳ್ಳಿ ಗ್ರಾಮದಲ್ಲಿ ಯುವ ಕ್ರಾಂತಿ ಸಂಘದ ಉದ್ಘಾಟನೆ ಹಾಗೂ ಪರಿಸರ ದಿನಾಚರಣೆಯನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮಾಭಿವೃದ್ಧಿಯ ಹಿಂದೆ ಸಮುದಾಯದ ಶ್ರಮವಿರಬೇಕು. ಹೊಸ ತಲೆಮಾರು ಸಿದ್ಧವಾಗುತ್ತಿದೆ, ಅವರಲ್ಲಿ ಉತ್ಸಾಹವಿದೆ. ಆಶೋತ್ತರಗಳಿವೆ. ಹಿರಿಯರು ಅವರ ಯೋಜನೆಗಳಿಗೆ ಸಹಕಾರ ನೀಡಿ ಬೆಂಬಲಿಸಬೇಕು. ಜವಾಬ್ದಾರಿಯಿಂದ ಹಿಮ್ಮೆಟ್ಟದ ಯುವಕರು ಸಿದ್ಧರಾಗುತ್ತಿರುವುದು ಉತ್ತಮ ಸೂಚನೆಯಾಗಿದೆ ಎಂದು ಹೇಳಿದರು.
ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಮಾತನಾಡಿ, ರೆಡ್ಕ್ರಾಸ್ ಸೊಸೈಟಿಯ ಸಹಕಾರದೊಂದಿಗೆ ರಕ್ತದಾನ ಶಿಬಿರಗಳನ್ನು ಆಯೋಜಿಸಿ ಜಿಲ್ಲೆಯಲ್ಲಿ ರಕ್ತದ ಅವಶ್ಯಕತೆಯಿರುವ ರೋಗಿಗಳಿಗೆ ನೆರವಾಗುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಸದಸ್ಯೆ ಶಿವಲೀಲಾ ರಾಜಣ್ಣ ಅವರ ಸನುದಾನದಿಂದ ಕಟ್ಟಲಾದ ಶಾಲಾ ಕೊಠಡಿಯ ಉದ್ಘಾಟನೆಯನ್ನು ಮಾಡಲಾಯಿತು. ಶಾಲಾ ಆವರಣದಲ್ಲಿ ಗಿಡಗಳನ್ನು ನೆಟ್ಟು ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ, ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾ.ಮುನಿನಾರಾಯಣರೆಡ್ಡಿ, ಡಾ.ಸತ್ಯನಾರಾಯಣರಾವ್, ಸಬ್ಇನ್ಸ್ಪೆಕ್ಟರ್ ವಿಜಯ್ರೆಡ್ಡಿ, ಜಿಲ್ಲಾ ಸಹಕಾರಿ ಒಕ್ಕೂಟದ ನಿರ್ದೇಶಕ ಟಿ.ಆರ್.ರಮೇಶ್, ಉಪನ್ಯಾಸಕ ಈಶ್ವರ್ ಪ್ರದೀಪ್, ಬಸವೇಶ್ವರ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಉದಯ್ರೆಡ್ಡಿ, ಬೈರಗಾನಹಳ್ಳಿ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕ ಮುನಿಬಸವಯ್ಯ, ಎಂ.ಕೆ.ಮುನಿಮಾರಪ್ಪ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಗುರುರಾಜರಾವ್, ನಿವೃತ್ತ ಪ್ರಾಧ್ಯಾಪಕ ಆಂಜನೇಯ, ಯುವ ಕ್ರಾಂತಿ ಸಂಘದ ಪುನೀತ್, ಕಾರ್ತಿಕ್, ಶಿವರಾಜ್, ಪೃಥ್ವಿರಾಜ್, ಅಂಬರೀಷ್, ಚಂದ್ರಶೇಖರ್, ಕುಮಾರ್, ಮೋಹನ್, ಗಜೇಂದ್ರ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -