32.5 C
Sidlaghatta
Thursday, March 28, 2024

ರೈತರೊಂದಿಗೆ ಗುಂಪು ಚರ್ಚೆ

- Advertisement -
- Advertisement -

ರಸಗೊಬ್ಬರಗಳನ್ನು ಕೊಂಡ ನಂತರ ಅವುಗಳ ಗುಣಮಟ್ಟವನ್ನು ಪರೀಕ್ಷಿಸಿಕೊಳ್ಳುವುದು ಅತ್ಯಗತ್ಯ ಎಂದು ರೇಷ್ಮೆ ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ತೇಜಸ್ವಿನಿ ತಿಳಿಸಿದರು.
ತಾಲ್ಲೂಕಿನ ಕುಂದಲಗುರ್ಕಿ ಗ್ರಾಮದಲ್ಲಿ ಈಚೆಗೆ ರೇಷ್ಮೆ ಕೃಷಿ ಮಹಾವಿದ್ಯಾಲಯದಿಂದ ಆರ್ ಎ ಡಬ್ಲು ಇ ಕಾರ್ಯಕ್ರಮದ ವತಿಯಿಂದ ನಡೆದ ರೈತರೊಂದಿಗೆ ಗುಂಪು ಚರ್ಚೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಲಬೆರೆಕೆಯ ಹಾಗೂ ಕಳಪೆ ಗುಣಮಟ್ಟದ ಯೂರಿಯ, ಡಿಎಪಿ, ಎಂಒಪಿ ರಸಗೊಬ್ಬರಗಳನ್ನು ಕೆಲವು ಅಂಗಡಿಳಲ್ಲಿ ನೀಡುತ್ತಾ ರೈತರಿಗೆ ಮೋಸ ಮಾಡುತ್ತಿರುವ ಬಗ್ಗೆ ವರದಿಗಳು ಬಂದಿರುವುದರಿಂದ ಈ ಬಗ್ಗೆ ರೈತರು ಹುಷಾರಾಗಿರಬೇಕು ಎಂದು ಹೇಳಿದರು.
ಭೂಮಿಯಿಂದ ಮಣ್ಣಿನ ಮಾದರಿಯನ್ನು ಸಂಗ್ರಹಣೆ ಮಾಡುವ ಬಗ್ಗೆ ರೈತರಿಗೆ ತಿಳುವಳಿಕೆ ನೀಡಿದ ಅವರು ರೇಷ್ಮೆ ಕೃಷಿ ಮಹಾವಿದ್ಯಾಲಯದ ಪ್ರಾದ್ಯಾಪಕರಾದ ಡಾ:ನವೀನ್, ಡಾ:ರಾಮಕೃಷ್ಣ ನಾಯಕ್ ರವರಿಂದ ರೈತರ ಭೂಮಿಯ ಮಣ್ಣನ್ನು ಪರೀಕ್ಷೆ ವರದಿಯನ್ನು ರೈತರಿಗೆ ಕೊಟ್ಟರು. ಭೂಮಿಯ ಗುಣಮಟ್ಟ ಹಾಗೂ ಫಸಲು ಚೆನ್ನಾಗಿ ತೆಗೆಯಲು ರೈತರು ಯಾವ ರೀತಿಯ ಗೊಬ್ಬರಗಳನ್ನು ಉಪಯೋಗಿಸಬೇಕು, ಅಂಗಡಿಗಳಲ್ಲಿ ರಸಗೊಬ್ಬರಗಳನ್ನು ತಂದ ಮೇಲೆ ರಸಗೊಬ್ಬರಗಳ ಗುಣಮಟ್ಟ ಯಾವ ರೀತಿ ಪರೀಕ್ಷೆ ಮಾಡಬೇಕು ಎಂಬುದರ ಬಗ್ಗೆ ಪ್ರಾಯೋಗಿಕವಾಗಿ ಪರೀಕ್ಷೆ ಮಾಡುವುದರ ಬಗ್ಗೆ ಪ್ರಾತ್ಯಕ್ಷಿಕ ತಿಳುವಳಿಕೆ ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಸ್ವಾತಿ, ವಿದ್ಯಾಶ್ರೀ, ಶ್ರಾವಣಿ, ವೀಣಾ, ತೇಜಸ್ವಿ ಹಾಗೂ ಸುತ್ತಮುತ್ತಲಿನ ಗ್ರಾಮದ ರೈತರು ಭಾಗವಹಿಸಿದ್ದರು.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!