ತಾಲ್ಲೂಕಿನ ತಿಮ್ಮನಾಯಕನಹಳ್ಳಿಯ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್.ಎನ್. ಹೊಸೂರು ಗ್ರಾಮದಲ್ಲಿ ಭಾನುವಾರ ಫೌಂಡೇಶನ್ ಫಾರ್ ಇಕಲಾಜಿಕಲ್ ಸೆಕ್ಯೂರಿಟಿ ಸಂಸ್ಥೆ ಮತ್ತು ಸೇ ಟ್ರಿ ಸಂಸ್ಥೆಯ ಸಹಭಾಗಿತ್ವದಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಪರಿಸರಕ್ಕೆ ಅನುಕೂಲವಾಗುವಂತಹ ಹೊಂಗೆ, ನೇರಳೆ, ಬೇವು, ಮುತ್ತುಗ, ಗಂಗಿರೇಣಿ ಸಸಿಗಳನ್ನು ಗ್ರಾಮದ ಗೋಮಾಳದಲ್ಲಿ ನಾಟಿ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಗ್ರಾಮಸ್ಥರು, ಶಾಲಾ ಮಕ್ಕಳು ಸಹ ಭಾಗವಹಿಸಿದ್ದರು.
ಗ್ರಾಮೀಣ ಜೀವನೋಪಾಯ ಬಲಪಡಿಸುವಲ್ಲಿ ಗೋಮಾಳ ಮತ್ತು ಜಲಮೂಲಗಳ ಅಭಿವೃದ್ಧಿ ಅವಶ್ಯವಾಗಿದ್ದು ಈ ದಿಸೆಯಲ್ಲಿ ಸಂಸ್ಥೆಯು ಸೇ ಟ್ರೀ ಸಂಸ್ಥೆ ಸಹಯೋಗದಲ್ಲಿ ಗ್ರಾಮದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.
ಈ ಸಂದರ್ಭದಲ್ಲಿ ಎಫ್ ಇ ಎಸ್ ಸಂಸ್ಥೆಯ ತಂಡದ ಪಿ. ವಿಜಯ್ ಕುಮಾರ, ಹಿರಿಯ ಯೋಜನಾಧಿಕಾರಿ ನಿಖತ್ ಪರ್ವಿನ್, ಕ್ಷೇತ್ರ ಸಂಯೋಜಕ ಸೌಭಾಗ್ಯ, ಗೋಪಿನಾಥ, ಸೇ ಟ್ರೀ ಸಂಸ್ಥೆಯ ದುರ್ಗೇಶ ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -
- Advertisement -