ತಾಲ್ಲೂಕಿನ ಬಶೆಟ್ಟಹಳ್ಳಿ ಹೋಬಳಿಯ ಚಿಕ್ಕತೇಕಹಳ್ಳಿ ಗ್ರಾಮದ ಮಹಿಳೆ ಹಾವು ಕಚ್ಚಿದ್ದರಿಂದ ಸಾವನ್ನಪ್ಪಿರುವ ಘಟನೆ ಬುಧವಾರ ನಡೆದಿದೆ.
ಚಿಕ್ಕತೇಕಹಳ್ಳಿ ಗ್ರಾಮದ ವಾಸಿ ಜಯಮ್ಮ(40) ಮೃತಪಟ್ಟಿರುವ ದುರ್ದೈವಿಯಾಗಿದ್ದಾರೆ. ಸೋಮವಾರ ಗ್ರಾಮದಲ್ಲಿ ಹೊಲ ಕೊಯ್ಯಲು ಕೂಲಿಗಾಗಿ ಹೋಗಿದ್ದಾಗ ಹಾವು ಕಡಿದಿದೆ. ತಕ್ಷಣ ಗ್ರಾಮಸ್ಥರು ಶಿಡ್ಲಘಟ್ಟದ ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳಿಸಿದ್ದಾರೆ. ಅಲ್ಲಿ ಎರಡು ದಿನಗಳ ಕಾಲ ಚಿಕಿತ್ಸೆ ಪಡೆದು ಅದು ಫಲಿಸದೇ ಬುಧವಾರ ರಾತ್ರಿ ಜಯಮ್ಮ ಮೃತಪಟ್ಟಿದ್ದಾರೆ.
ಜಯಮ್ಮ ಅವರ ಗಂಡ ನಾಲ್ಕು ತಿಂಗಳ ಹಿಂದೆಯಷ್ಟೆ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಕೂಲಿ ಮಾಡಿ ಜೀವನ ನಡೆಸುತ್ತಿದ್ದ ಇವರಿಗೆ ಸ್ವಂತ ಜಮೀನಾಗಲೀ ಮನೆಯಾಗಲೀ ಇರಲಿಲ್ಲ. ಇವರ ಇಬ್ಬರು ಹೆಣ್ಣು ಮಕ್ಕಳಲ್ಲಿ ಒಬ್ಬರು ಪದವೀದರರಾಗಿದ್ದು, ಮತ್ತೊಬ್ಬರು ಪದವಿ ವ್ಯಾಸಂಗ ನಡೆಸುತ್ತಿದ್ದಾರೆ. ತಂದೆ ಮತ್ತು ತಾಯಿಯ ಅಗಲಿಕೆಯಿಂದಾಗಿ ಅನಾಥರಾದ ಹೆಣ್ಣು ಮಕ್ಕಳು ದಿಕ್ಕುತೋಚದಂತಾಗಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ತಾಯಿಯ ಶವದ ಮುಂದೆ ಈ ಇಬ್ಬರು ಹೆಣ್ಣುಮಕ್ಕಳ ರೋಧನ ಮನಕಲಕುವಂತಿತ್ತು.
- Advertisement -
- Advertisement -
- Advertisement -
- Advertisement -